Publish Date: Sun, 05 Mar 2023 (13:15 IST)
Updated Date: Sun, 05 Mar 2023 (13:41 IST)
ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಸೌಲಭ್ಯ ಆದೇಶ ಜಾರಿಯಾಗಿದೆ.. 1ನೇ ಏಪ್ರಿಲ್ 2023ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ. 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲಾಗಿತ್ತು. ಇದೀಗ ಕ್ಯಾಶ್ ಲೆಸ್ ಆರೋಗ್ಯ ಸೇವೆ ಒದಗಿಸಿದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡಲಾಗಿದ್ದು, ಒಂದು ವಾರದೊಳಗೆ ನೌಕರರ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆ. ಈ ಯೋಜನೆಗೆ ಸರ್ಕಾರ 1250 ಕೋಟಿ ವೆಚ್ಚ ಪಡಿಸಿದೆ. ಯೋಜನೆ ಜಾರಿಯಾದ್ರೆ ನೌಕರರು ಹಾಗೂ ಕುಟುಂಬದವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗಿದೆ.. ಚಿಕಿತ್ಸೆ ಪಡೆಯುವ ಆಸ್ಪತ್ರೆಯವರಿಗೆ ನೀಡಿ ಚಿಕಿತ್ಸೆ ಪಡೆಯಬಹುದು, ಈ ಯೋಜನೆ ಅಡಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರನ್ನ ಒಳಗೊಳ್ಳುತ್ತದೆ.