Webdunia - Bharat's app for daily news and videos

Install App

40 ಕೆಜಿ ತೂಕದ ಕಿರೀಟ ಹೊತ್ತು ಸಾಗಿದ ಅರ್ಚಕ ವಿ .ಜ್ಞಾನೇಂದ್ರ

Webdunia
ಶುಕ್ರವಾರ, 7 ಏಪ್ರಿಲ್ 2023 (19:58 IST)
ಕಳೆದ ಮದ್ಯರಾತ್ರಿ 12 ಕ್ಕೆ ವಿಶ್ವವಿಖ್ಯಾತಿ ಕರಗ ಮಹೋತ್ಸವ ನಡೆದಿದ್ದು, ಗೋವಿಂದಾ.. ಗೋವಿಂದ ..ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡು ಪುನೀತರಾದ್ರು.ಝಗಮಗಿಸುವ ದೀಪಾಲಂಕಾರ, ದೇವಾಲಯಕ್ಕೆ ವಿಶೇಷ ಅಲಂಕಾರ, ಪಾಂಡವರಿಗೆ ಹೂವಿನ ಹಾರ... ಇದರ ಮಧ್ಯೆ ಸಾವಿರಾರು ವೀರಕುಮಾರರು ಕೈಯಲ್ಲಿ ಕತ್ತಿ, ಗೋವಿಂದ... ಗೋವಿಂದ.. ಎಂಬ ಜಪ....ತಿಗರಳಪೇಟೆ, ನಗರ್ತರಪೇಟೆ, ಕಬ್ಬನ್ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯ ಮುಖ್ಯ ರಸ್ತೆ ಹಾಗೂ ಗಲ್ಲಿಗಲ್ಲಿಯೂ ಹಸಿರು ತೋರಣ ಚೈತ್ರ ಪೌರ್ಣಿಮೆಯ ಬೆಳಕಿನಲ್ಲಿ ಪ್ರತಿ ಮನೆಯ ಮುಂದೆ ನೀರು ಹಾಕಿ, ಸಾರಿಸಿ, ರಂಗೋಲಿ ಹಾಕುವ ಸಡಗರ. ಇದೆಲ್ಲಾ ಬೆಂಗಳೂರು ಪ್ರಸಿದ್ಧ ಕರಗ ಶಕ್ತ್ಯೋತ್ಸವ ಸಂಭ್ರಮದ ನೋಟ.

ದ್ರೌಪದಿದೇವಿ ಕರಗ ಶಕ್ತ್ಯೋತ್ಸವ ಅಂಗವಾಗಿ ನಗರದ ಪೇಟೆ ಬೀದಿಗಳಲ್ಲಿ ಮಾರ್ಚ್ 29ರಿಂದಲೇ ಸಿದ್ಧತೆ ನಡೆದಿತ್ತು. ಗುರುವಾರ ಪೌರ್ಣಿಮೆಯಂದು ಹೂವಿನ ಕರಗದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಈ ಪ್ರದೇಶಗಳಲ್ಲಿ ಸಂಭ್ರಮವಿತ್ತು. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಹಸಿ ಕರಗದ ಪೂಜೆ ಸೇರಿದಂತೆ ವಿವಿಧ ರೀತಿಯ ಪೂಜೆಗಳು ನಡೆದವು. ಅರ್ಚಕ ಜ್ಞಾನೇಂದ್ರ ವಿಶೇಷ ಪೂಜೆಗಳನ್ನು ಸಲ್ಲಿಸಿ ,ಧರ್ಮರಾಯಸ್ವಾಮಿ ದೇವಸ್ಥಾನ ಹೊರಭಾಗದಲ್ಲಿ ಕರ್ಪೂರ ಸೇವೆ ನಡೆಯಿತು. ವರ್ಷಗಳಿಂದ ಹೊತ್ತಿದ್ದ ಹರಕೆ ತೀರಿಸಲು ಸಣ್ಣ ಕರ್ಪೂರಗಳು ಸೇರಿದಂತೆ ಬೃಹತ್ ಗಾತ್ರದ ಕರ್ಪೂರಗಳ ಆರತಿ ಮಾಡಿದರು. ಕರಗದ ಮುಂದೆ ಸಾಗುವ ಎಲ್ಲ ವಯೋಮಾನದ ವೀರಕುಮಾರರು, ಸಂಜೆಯಿಂದಲೇ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬಂದು ಸೇರಿದ್ದರು. 

ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ತೇರುಗಳು ಧರ್ಮರಾಯ ಸ್ವಾಮಿ ಮಹಾರಥೋತ್ಸವ ಹಿಂದೆ ಸಾಗಲು ಜೆ.ಸಿ.ರಸ್ತೆ, ಟೌನ್ ಹಾನ್ಗಳಲ್ಲಿ ನಿಂತಿದ್ದವು.ಝಗಮಗಿಸುವ ಬೆಳಕು, ಓಲಗದ ಸದ್ದು ಇಡೀ ಪೇಟೆಯನ್ನೇ ಆವರಿಸಿಕೊಂಡಿತ್ತು. ತಡರಾತ್ರಿ ಮಲ್ಲಿಗೆಯ ಪರಿಮಳ ಹರಡುತ್ತ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗದ ಮೆರವಣಿಗೆ ಹೊರಟಿತು. ಕರಗ ಹೊರ ಬಂದ ಕೂಡಲೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಏಳು ಸುತ್ತಿನ ಕೋಟೆಯಂತೆ ಒಂದರೊಳಗೊಂದು ಪೇಟೆಗಳು ಬೆರೆತು ಕಿಷ್ಕಿಂಧೆಯಂತೆ ಇರುವ ಈ ಪ್ರದೇಶದ ಪ್ರತಿ ಗಲ್ಲಿಯಲ್ಲೂ ಜನಸಾಗರ ತುಂಬಿ ತುಳುಕುತ್ತಿತ್ತು.ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಂತೆ ತಿಗಳ ಸಮುದಾಯ ಅರ್ಚಕ ವಿ .ಜ್ಞಾನೇಂದ್ರ ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ರು , ವಿಷೇಶ ಏನಂದ್ರೆ ಮಲ್ಲಿಗೆ ಹೋಗಳಿಂದ ಅಲಂಕರಿಸಿದ ಸುಮಾರು 40 ಕೆ ಜಿ ತೂಕದ ಕಿರೀಟವನ್ನು ತಲೆಯ ಮೇಲೆ ಹೊತ್ತು ನಗರದ ವಿವಿದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು, ಇದಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

 ಇನ್ನು  ಈ ಕರಗ  ಮಹೋತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು.
ತಿಗಳರಪೇಟೆ ಸೇರಿ ಕರಗ ಸಾಗುವ ಮಾರ್ಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ತಲುಪುವ ದೇವಸ್ಥಾನಗಳನ್ನು ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.ಪ್ರಸಾದ ವಿನಿಯೋಗ: ಅವೆನ್ಯೂ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಸುತ್ತಮುತ್ತ ಹಾಗೂ ಕರಗ ಸಾಗುವ ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಪುಲಾವ್, ಬಿಸಿ ಬೇಳೆ ಬಾತ್ ಸೇರಿ ವಿವಿಧ ರೀತಿಯ ಪ್ರಸಾದ ವಿತರಿಸಲಾಯಿತು. ಕರಗ ನೋಡಲು ಬಂದ ಭಕ್ತರಿಗೆ ಪಾನಕ, ಮಜ್ಜಿಗೆಯನ್ನೂ ನೀಡಲಾಯಿತು.  ಬೆಂಗಳೂರು ವಿಶ್ವವಿಖ್ಯಾತಿ ಕರಗಕ್ಕೆ ಬೆಂಗಳೂರಿಗೆ ಬೆಂಗಳೂರೇ ಕರಗಕ್ಕೆ ಸಾಕ್ಷಿಯಾಗಿತ್ತು,, ಲಕ್ಷಾಂತರ ಜನರು ಈ ಕರಗ ಮಹೋತ್ಸವ ನೋಡಿ ಕಣ್ತುಂಬಿಕೊಂಡ್ರು 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments