Webdunia - Bharat's app for daily news and videos

Install App

ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Webdunia
ಬುಧವಾರ, 27 ಮೇ 2020 (17:21 IST)
ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಬರುವ ಸರ್ಕಾರಿ ಪಾಲನಾ ಸಂಸ್ಥೆಗಳಲ್ಲಿ ಖಾಲಿಯಿರುವ ಅರೆಕಾಲಿಕ ಭೋದಕ, ಬೋಧಕೇತರ ಹಾಗೂ ಅರೆಕಾಲಿಕ ವೈದ್ಯರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರೆಕಾಲಿಕ ಇಂಗ್ಲೀಷ ಬೋಧಕರು-02 ಹುದ್ದೆ ಹಾಗೂ ವಿಜ್ಞಾನ ಮತ್ತು ಗಣಿತ ಬೋಧಕರು-02 ಹುದ್ದೆಗಳಿಗೆ ಬಿ.ಎಡ್. ದೊಂದಿಗೆ ವಿಶೇಷ ಮಕ್ಕಳ ಪಾಲನಾ ಗೃಹದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಅನುಭವ ಹೊಂದಿರಬೇಕು. ಯೋಗಾ, ದೈಹಿಕ ಶಿಕ್ಷಕರು-03 ಹುದ್ದೆಗಳಿಗೆ ದೈಹಿಕ ಶಿಕ್ಷಣದಲ್ಲಿ ಡಿಪ್ಲೋಮಾ ಪಾಸಾಗಿರಬೇಕು.

ಸಂಗೀತ/ಕ್ರಾಫ್ಟ್ ಶಿಕ್ಷಕರು-02 ಹುದ್ದೆಗಳಿಗೆ ಸಂಗೀತ, ವಾದ್ಯ ಹಾಗೂ ಕಲೆ ವಿಷಯದಲ್ಲಿ ಅಂಗೀಕೃತ ಸಂಸ್ಥೆಯಿಂದ ಸರ್ಟೀಫೈಡ್ ಕೋರ್ಸ್ ಪಾಸಾಗಿರಬೇಕು. ಎಜ್ಯುಕೇಟರ್ 3 ಹುದ್ದೆಗಳಿಗೆ ಡಿ.ಎಡ್. ದೊಂದಿಗೆ ವಿಶೇಷ ಮಕ್ಕಳ ಪಾಲನಾ ಗೃಹಗಳಲ್ಲಿ ಮಕ್ಕಳ ಶಿಕ್ಷಣ ನೀಡಲು ಅರ್ಹರಾಗಿರಬೇಕಲ್ಲದೇ ಅನುಭವ ಹೊಂದಿರಬೇಕು. ಅರೆಕಾಲಿಕ ವೈದ್ಯರು-3 ಹುದ್ದೆಗಳಿಗೆ ಎಂ.ಬಿ.ಬಿ.ಎಸ್. ಪಾಸಾಗಿರಬೇಕು.

ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, ಒಂದು ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ.  ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ವೀಕ್ಷರ್ಣಾಲಯ, ಮೊದಲನೇ ಮಹಡಿ, ಚಂದ್ರಶೇಖರ ಕ್ರೀಡಾಂಗಣದ ಎದುರಿಗೆ, ಕಲಬುರಗಿ ಕಚೇರಿಯಲ್ಲಿ  2020 ಜೂನ್ 4 ರ ಸಂಜೆ 5.30 ಗಂಟೆಯೊಳಗಾಗಿ ಸಲ್ಲಿಸಬೇಕು.

ಅಭ್ಯರ್ಥಿಗಳು ನಿಗದಿಪಡಿಸಿದ ಗೌರವಧನ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-243219ಗೆ ಸಂಪರ್ಕಿಸಬಹುದು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಮತ್ತೆ ಲಕ್ಷದ ಗಡಿ ದಾಟಿದ ಚಿನ್ನದ ಬೆಲೆ

ಆಟೋ ದರ ಏರಿಕೆಗೆ ಸರ್ಕಾರದ ಸಿದ್ಧತೆ: ಹಿಂಗಾದ್ರೆ ಬದುಕೋದು ಹೇಗೆ ಸರ್ ಎಂದ ಜನ

ರೈಲು ದರ ಹೆಚ್ಚಿಸಿದ್ದು ಸರಿಯಲ್ಲ ಸಿದ್ದರಾಮಯ್ಯ: ಬಿಎಂಟಿಸಿಯಲ್ಲಿ ಕೋಟ್ಯಾಧಿಪತಿಗಳು ಹೋಗ್ತಾರಾ ಎಂದ ನೆಟ್ಟಿಗರು

ಸಾಮಾನ್ಯರು ಸಂಚರಿಸುವ ರೈಲು ಪ್ರಯಾಣ ದರ ಏರಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ

ಹೃದಯದ ಆರೋಗ್ಯಕ್ಕಾಗಿ ಇದೊಂದು ಉಸಿರಾಟದ ವ್ಯಾಯಾಮ ಮಾಡಿ

ಮುಂದಿನ ಸುದ್ದಿ
Show comments