Publish Date: Mon, 28 Jan 2019 (18:41 IST)
Updated Date: Mon, 28 Jan 2019 (18:45 IST)
ಕೆಆರ್ ಎಸ್ ಸುತ್ತಮುತ್ತ ಹಾಗೂ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಗೆ ಪರ ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ.
ಮಂಡ್ಯದ ಕೆಆರ್ ಎಸ್ ಸುತ್ತಮುತ್ತ ಹಾಗೂ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ನಡೆಯಲಿರುವ ಟ್ರಯಲ್ ಬ್ಲಾಸ್ಟ್ ಈಗ ಚರ್ಚೆಗೆ ಕಾರಣವಾಗಿದೆ.
ಪುಣೆಯ ಸಿಡಬ್ಲುಪಿಆರ್ಸಿ ತಂಡದಿಂದ ಟ್ರಯಲ್ ಬ್ಲಾಸ್ಟ್ ನಡೆಯುತ್ತಿದೆ.
ಗಣಿಗಾರಿಕೆಯಿಂದಾಗಿ ಕೆಆರ್ ಎಸ್ ಆಣೆಕಟ್ಟೆಗೆ ಆಗಬಹುದಾದ ಪರಿಣಾಮ ಕುರಿತು ಪರೀಕ್ಷೆ ನಡೆಸಿ ತಂಡವು ವರದಿ ನೀಡಲಿದೆ. ಈ ತಂಡಕ್ಕೆ ಕೆಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.