Select Your Language

Notifications

webdunia
webdunia
webdunia
webdunia

ಕೈಕಂಬ ಬಳಿ ಮತ್ತೊರ್ವ ಯುವಕನಿಗೆ ಚೂರಿ ಇರಿತ

ಕೈಕಂಬ ಬಳಿ ಮತ್ತೊರ್ವ ಯುವಕನಿಗೆ ಚೂರಿ ಇರಿತ
ಬಂಟ್ವಾಳ , ಶನಿವಾರ, 8 ಜುಲೈ 2017 (15:44 IST)
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬ ಬಳಿ ಮತ್ತೊಬ್ಬ ಯುವಕನಿಗೆ ಚೂರಿಯಿಂದ ಇರಿದ ಘಟನೆ ವರದಿಯಾಗಿದೆ
 
ಶರತ್ ಮಡಿವಾಳ ಹತ್ಯೆಯಿಂದ ಉದ್ವಿಗ್ನ ಪರಿಸ್ಥಿತಿ ಎದುರಾಗಿರುವ ಕೈಕಂಬ ಬಳಿ ಮತ್ತೊಬ್ಬ ಯುವಕನಿಗೆ ಚೂರಿಯಿಂದ ಇರಿದಿರುವುದು ಪರಿಸ್ಥಿತಿ ಮತ್ತಷ್ಟು ಹದಗೆಡುವಂತಹ ಪರಿಸ್ಥಿತಿ ಎದುರಾಗಿದೆ.
 
ಇಂದು ಬೆಳಿಗ್ಗೆ ಶರತ್ ಮಡಿವಾಳ ಬೆಂಬಲಿಗರು ಕೈಕಂಬ ಬಳಿ ಕಲ್ಲುತೂರಾಟ ನಡೆಸಿ ಹಲವು ವಾಹನಗಳನ್ನು ಜಖಂಗೊಳಿಸಿದ್ದರು.
 
ರಿಯಾಜ್‌ ಎನ್ನುವ ಯುವಕನಿಗೆ ಚೂರಿಯಿಂದ ಇರಿಯಲಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಂಟ್ವಾಳ್ ತಾಲೂಕಿನಾದ್ಯಂತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಭಾರಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಪ್ರವಾಸ ಮಾಡದಂತೆ ನಾಗರಿಕರಿಗೆ ಚೀನಾ ಸರಕಾರ ಸಲಹೆ