Select Your Language

Notifications

webdunia
webdunia
webdunia
webdunia

ಮೇಕೆದಾಟು, ಸಿದ್ದರಾಮೋತ್ಸವ ಬಳಿಕ ಮತ್ತೊಂದು ಯಾತ್ರೆ

ಮೇಕೆದಾಟು, ಸಿದ್ದರಾಮೋತ್ಸವ ಬಳಿಕ ಮತ್ತೊಂದು ಯಾತ್ರೆ
bangalore , ಭಾನುವಾರ, 18 ಸೆಪ್ಟಂಬರ್ 2022 (20:37 IST)
ಮತ್ತೊಂದು ಮೆಗಾ ಯಾತ್ರೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ .ಚುನಾವಣೆಗೂ ಮುನ್ನ ಅಲೆ ಎಬ್ಬಿಸಲು ಕಾಂಗ್ರೆಸ್ ಯೋಜನೆ ಮಾಡಿದೆ.ಸಿದ್ದು ಉತ್ಸವ ಆಯ್ತು, ಈಗ ಬಸ್ ಯಾತ್ರೆಗೆ ರೆಡಿಮಾಡಿಕೊಳ್ತಿದೆ.
 
ಎಸ್.ಎಂ.ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ರಥಯಾತ್ರೆಯನ್ನ 3ನೇ ತಿಂಗಳಿಗೆ 224 ಕ್ಷೇತ್ರಗಳ ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ.ಬಸ್ ಯಾತ್ರೆಗೆ ಐಷಾರಾಮಿ ಕ್ಯಾರವಾನ್ ರೆಡಿಯಾಗಿದೆ.ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಸ್ ರಥಯಾತ್ರೆ ನಡೆಸಲಾಗುವುದು.ಸಿದ್ದು ಆಪ್ತ ಶಾಸಕರಿಂದ ಗಾಂಧಿ ಗಾಂಧಿಯನ್ನ ಭೇಟಿ ಮಾಡಲು ಅವಕಾಶವಿದೆ.
 
ಬಳ್ಳಾರಿ ಪಾದಯಾತ್ರೆಯ ರೀತಿ ಸಕ್ಸಸ್‌ಗೆ ಸಿದ್ದು ಬಾಣದ ಸಿದ್ಧತೆ ನಡೆಸಿದೆ.ಡಿಕೆಶಿ, ಎಂ.ಬಿ.ಪಾಟೀಲ್ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ.ಮಿತ್ಸುಬಿಷಿ ಸಂಸ್ಥೆಯ ವಿಶೇಷ ಕ್ಯಾರವಾನ್ ರೆಡಿ ಮಾಡಿದೆ.ವಾಹನದ ಮೇಲೆ ನಿಂತು ಮಾತನಾಡುವ ವ್ಯವಸ್ಥೆ ಬಸ್ ನಲ್ಲಿದ್ದು,ಸಿದ್ದರಾಮೋತ್ಸವ ಮಾಡಿದ ತಂಡದಿಂದಲೇ ಹೊಸ ಯಾತ್ರೆ ಶುರುವಾಗಿದೆ. ಡಿಕೆಶಿ, ಸಿದ್ದು ಸೇರಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಸಂಚಾರ ಬಸ್ ಯಾತ್ರೆಗೆ ಸಿದ್ಧತೆ.ರಾಹುಲ್ ಗಾಂಧಿ ಒಪ್ಪಿಗೆಯಲ್ಲೇ ಬಾಕಿ ಉಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಮಹೋತ್ಸವ ಅಂಗವಾಗಿ ನಾಳೆ ಅಂತಿಮ ಸಿದ್ಧತೆ