Webdunia - Bharat's app for daily news and videos

Install App

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ

Sampriya
ಶನಿವಾರ, 4 ಅಕ್ಟೋಬರ್ 2025 (08:20 IST)
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಬೆಳವಣಿಗೆ ಸಂಬಂಧಿಸಿ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಆರೋಪ ಪ್ರಕರಣದಲ್ಲಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ ಅವರ ಪತ್ನಿ ಎಸ್‌ಐಟಿ ಕಚೇರಿಯಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. 

ಜಯಂತ್ ಅವರ ಪತ್ನಿ ಬೆಂಗಳೂರಿನಿಂದ ಬೆಳಿಗ್ಗೆ ಬೆಳ್ತಂಗಡಿಗೆ ಬಂದು ಮಧ್ಯಾಹ್ನ 12 ಗಂಟೆಗೆ ಎಸ್ಐಟಿ ಅಧಿ
ಕಾರಿಗಳ ಬಳಿಗೆ ತೆರಳಿದ್ದರು. ಸಂಜೆ 4.30ರ ವರೆಗೂ ಮಾಹಿತಿ ಪಡೆದುಕೊಳ್ಳಲಾಯಿತು. 

ಮಾಧ್ಯಮವೊಂದಕ್ಕೆ  ಮಾತನಾಡಿದ ಜಯಂತ್‌, ನೋಟಿಸ್ ಬಂದಿತ್ತು. ನಾನು ಕೆಲವು ದಿನಗಳ ಹಿಂದೆ ಹೇಳಿಕೆ ದಾಖಲಿಸಿದ್ದೆ. ಪತ್ನಿಗೆ ಅನಾರೋಗ್ಯ ಇದ್ದ ಕಾರಣ ಸ್ವಲ್ಪ ತಡವಾಯಿತು. ಎಂಜಿನಿಯರಿಂಗ್ ಓದುತ್ತಿರುವ ಮಗನೊಂದಿಗೆ ತೆರಳಿ ಅವರು ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬೇರೆ ಊರಿನಿಂದ ಹೋರಾಟಗಾರರು ಯಾರು ಬಂದರೂ ಅವರಿಗೆ ಊಟ, ಆಶ್ರಯ ನೀಡುವ ಸಂಪ್ರದಾಯ ಬೆಳೆಸಿಕೊಂಡಿದ್ದೇವೆ. ಸಾಕ್ಷಿ ದೂರುದಾರನಿಗೂ ಹಾಗೇ ಊಟ ಹಾಕಿದ್ದೆವು. ಎಸ್‌ಐಟಿಯವರು ಕರೆದಾಗ ಹೋಗುವುದು ನಮ್ಮ ಕರ್ತವ್ಯ. ಆದ್ದರಿಂದ ಮೂವರೂ ಹೇಳಿಕೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೂಜೆ ನೆಪದಲ್ಲಿ ಯುವತಿಯನ್ನು ಪ್ರಜ್ಞೆ ತಪ್ಪಿಸಿ ಪ್ಯಾಂಟ್ ಬಿಚ್ಚಲು ಹೊರಟಿದ್ದ ನಕಲಿ ಬಾಬ.. ಮುಂದೇನಾಯ್ತು ನೋಡಿ Video

ಅಮ್ಮನನ್ನು ದೇವರಂತೆ ಕಂಡ ಮಗ.. ಈ ವಿಡಿಯೋ ನೋಡ್ತಿದ್ದರೆ ಕಣ್ಣಂಚು ಒದ್ದೆಯಾಗುತ್ತದೆ Video

ಡಿಬಾಸ್ ಎಂದು ದರ್ಶನ್ ಫ್ಯಾನ್ಸ್ ರಗಳೆ, ಮೈಕ್ ಬಿಸಾಕಿ ಕೂತೇ ಬಿಟ್ಟ ಸಿಎಂ ಡಿಕೆ ಶಿವಕುಮಾರ್ Video

ಕಾಂಗ್ರೆಸ್ ರೆಬೆಲ್ ಶಾಸಕರ ಅಸಮಾಧಾನ ನಿಂತಿಲ್ಲ, ಸೀಕ್ರೆಟ್ ಆಗಿ ನಡೀತಿದೆ ಈ ಪ್ಲ್ಯಾನ್

ಫ್ರೆಂಡ್ಸ್ ಗಾಗಿ ಸಮಯವಿದೆ, ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟಕ್ಕಿಲ್ವಾ.. ಅಭಿಜೀತ್ ದಿಪ್ಕೆಗೆ ನೆಟ್ಟಿಗರ ಪ್ರಶ್ನೆ

ಮುಂದಿನ ಸುದ್ದಿ
Show comments