Publish Date: Fri, 12 Oct 2018 (15:31 IST)
Updated Date: Fri, 12 Oct 2018 (15:39 IST)
ರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿರೋ ಅನಿತಾ ಕುಮಾರಸ್ವಾಮಿ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಅನಿತಾ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ಆಗಮಿಸಿರುವ ಅವರು, ಶಾರದಾಂಭೆ ದರ್ಶನ ಪಡೆದುಕೊಂಡರು.
ಅನಿತಾ ಕುಮಾರಸ್ವಾಮಿ ಯವರು ಶಾರದಾಂಬೆಗೆ ಪೂಜೆ ಸಲ್ಲಿಸಿ ಜಗದ್ಗುರುಗಳ ಭೇಟಿ ಮಾಡಿದರು.
ಕಳೆದ ಬಾರಿಯು ಜೆಡಿಎಸ್ ನಿಂದ ಅಭ್ಯರ್ಥಿಗಳು ಕಣಕ್ಕಿಳಿಯುವ ಮುನ್ನ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದರು. ರಾಮನಗರ ಉಪಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಅನಿತಾ ಕುಮಾರಸ್ವಾಮಿ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದಾರೆ.
Jagadeesh
Publish Date: Fri, 12 Oct 2018 (15:31 IST)
Updated Date: Fri, 12 Oct 2018 (15:39 IST)