ಕ್ರಿಶ್ಚಿಯನ್ ರಲ್ಲಿ ಇದ್ಯಾವುದು ನಮಗೇ ಗೊತ್ತಿಲ್ಲದ ಜಾತಿ, ಉಪಜಾತಿ: ಅನಿಲ್ ಥಾಮಸ್

Krishnaveni K
ಶನಿವಾರ, 6 ಸೆಪ್ಟಂಬರ್ 2025 (13:35 IST)
ಬೆಂಗಳೂರು: ಕಾಂಗ್ರೆಸ್ ಸರಕಾರವು ಜಾತಿವಾರು ಗಣತಿ ವೇಳೆ ಧರ್ಮದ ಒಳಗೆ ಜಾತಿಗಳನ್ನು ಹುಡುಕುತ್ತಿದೆ. ಇಲ್ಲದೇ ಇರುವ ಜಾತಿಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಅಧ್ಯಕ್ಷ ಅನಿಲ್ ಥಾಮಸ್ ಅವರು ಖಂಡಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014-15ರಲ್ಲಿ ಕಾಂತರಾಜು ಅವರ ನೇತೃತ್ವದ ವರದಿ, ಹೆಗ್ಡೆಯವರ ನೇತೃತ್ವದ ವರದಿಯನ್ನು ಕಸದ ಬುಟ್ಟಿಗೆ ಹಾಕಿದೆ. ಆಗ ಕ್ರೈಸ್ತ ಸಮುದಾಯಗಳನ್ನು 44 ಉಪ ಜಾತಿಗಳ ಕಾಲಂ ಹಾಕಿ ಒಡಕು ತರುವ ಕೆಟ್ಟ ನೀತಿಯನ್ನು ಸಿದ್ದರಾಮಯ್ಯನವರ ಸರಕಾರ ಮಾಡಿತ್ತು ಎಂದು ಟೀಕಿಸಿದರು. ಈಗ ಆ ಜಾತಿಗಳ ಸಂಖ್ಯೆಯನ್ನು 52ಕ್ಕೆ ಏರಿಸಿದ್ದಾರೆ ಎಂದು ಗಮನ ಸೆಳೆದರು.
 
ಕ್ರೈಸ್ತ ಧರ್ಮದಲ್ಲಿ ಯಾವ ಜಾತಿಯೂ ಇಲ್ಲ; ಸಿದ್ದರಾಮಯ್ಯನವರ ಸರಕಾರದಲ್ಲಿ ಕೆ.ಜೆ.ಜಾರ್ಜ್, ಐವಾನ್ ಡಿಸೋಜ, ಜೆ.ಆರ್.ಲೋಬೊ, ಪ್ರೊ. ಜಾಫೆಡ್ ಮೊದಲಾದವರಿದ್ದು, ಇವರಿಗೆ ಬುದ್ಧಿ ಭ್ರಮೆ ಆಗಿದೆಯೇ ಎಂದು ಪ್ರಶ್ನಿಸಿದರು. ಅವರೆಲ್ಲರಿಗೆ ಕ್ರೈಸ್ತ ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲವೆಂದು ಗೊತ್ತಿಲ್ಲವೇ ಎಂದು ಕೇಳಿದರು.
 
ಕ್ರೈಸ್ತರನ್ನು ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಆಗಿ ಸಂವಿಧಾನದ ವಿರುದ್ಧವಾಗಿ ಕ್ರೈಸ್ತಧರ್ಮದಲ್ಲಿ ಜಾತಿ ವ್ಯವಸ್ಥೆ ತಂದು ಒಡಕನ್ನು ತರುತ್ತಿದ್ದಾರೆ. ಕಿತ್ತಾಡುವ ನಿಟ್ಟಿನಲ್ಲಿ ಜಾತಿ ವ್ಯವಸ್ಥೆ ಹುಟ್ಟು ಹಾಕುವ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು ಹೇಳಿದರು.
 
2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಕ್ರೈಸ್ತರ ಸಂಖ್ಯೆ 11.44 ಲಕ್ಷದಷ್ಟಿತ್ತು. ಈ ಧರ್ಮದಲ್ಲಿ ರೋಮನ್ ಕ್ಯಾಥೊಲಿಕ್, ರೋಮನ್ ಕ್ಯಾಥೊಲಿಕ್ (ಸಿರಿಯನ್), ಆರ್ಥೊಡಕ್ಸ್ ಚರ್ಚ್, ಚರ್ಚ್ ಆಫ್ ಸೌತ್ ಇಂಡಿಯ, ಚರ್ಚ್ ಆಫ್ ನಾರ್ತ್ ಇಂಡಿಯ, ಲೂಥರನ್ ಚರ್ಚ್, ಬ್ರದರನ್ ಚರ್ಚ್, ಬ್ಯಾಪ್ಟಿಸ್ಟ್ ಚರ್ಚ್ ಮೊದಲಾದ ನೂರಾರು ಸಣ್ಣ ಪೆಂಟಕೋಸ್ತಲ್ ಚರ್ಚ್‍ಗಳೂ ಇವೆ. ಆದರೆ, ಜನಸಾಮಾನ್ಯರಿಗೆ ಕೇಳಿದರೆ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಎಂದು ಜನಸಾಮಾನ್ಯರು ಹೇಳುತ್ತಾರೆ. ನೂರಾರು ಪಂಗಡಗಳಿವೆ. ನಮ್ಮಲ್ಲಿ ಜಾತಿಗಳಿಲ್ಲ; ಪಂಗಡಗಳಿವೆ. ಸರಕಾರವು ಕುಲಶಾಸ್ತ್ರ ಅಧ್ಯಯನ ಮಾಡುವಂತೆ ಒತ್ತಾಯಿಸಿದರು.
 
ಮುಸಲ್ಮಾನರಿಗೆ ಸಾಚಾರ್ ಸಮಿತಿಯಿಂದ ಯಾವ ಥರ ಅನುಕೂಲ ಆಗಿತ್ತೋ ಅದೇರೀತಿ ರಾಜ್ಯದಾದ್ಯಂತ ಕ್ರೈಸ್ತರ ಕುಲಶಾಸ್ತ್ರ ಅಧ್ಯಯನ ನಡೆಸಬೇಕೆಂದು ಅವರು ಮನವಿ ಮಾಡಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹಿಳೆಯರಿಗೆ ಋತುಚಕ್ರದ ರಜೆ ನೀಡಿದ್ದ ಸರ್ಕಾರಕ್ಕೆ ಶಾಕ್ ನೀಡಿದ ಹೈಕೋರ್ಟ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಕುರಾನ್, ಬೈಬಲ್ ಬಗ್ಗೆ ಇಂತಹ ಹೇಳಿಕೆ ನೀಡಲಿ: ಕೆಎಸ್ ಈಶ್ವರಪ್ಪ

ಡಾ ಸಿಎನ್ ಮಂಜುನಾಥ್ ಪ್ರಕಾರ ಹೃದಯಾಘಾತಕ್ಕೆ ಇದೊಂದು ಕಾರಣ ಸಾಕು

ಮುಂದಿನ ಸುದ್ದಿ
Show comments