Publish Date: Mon, 30 Apr 2018 (08:48 IST)
Updated Date: Mon, 30 Apr 2018 (08:49 IST)
ಬಾಗಲಕೋಟೆ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಟಕ ಕಂಪನಿ ದೇಶದಲ್ಲಿ ಇರಬಾರದು ಎಂದು ಕಾಂಗ್ರೆಸ್ ಆಡಳಿತದ ಬಗ್ಗೆ ಕೇಂದ್ರ ಸಚಿವ ಅನಂತ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧವೂ ಏಕವಚನದ ವಾಗ್ದಾಳಿ ನಡೆಸಿದ ಅನಂತ ಕುಮಾರ್ ಅವರಿಗೆ ಚುನಾವಣೆ ಬಂದಾಗ ದೇವಾಲಯ ನೆನಪಾಗುತ್ತದೆ. ರುದ್ರಾಕ್ಷಿ ಹಾಕಿಕೊಂಡು ದೇವಾಲಯಕ್ಕೆ ಹೋಗುತ್ತಾನೆ, ಶಿಲುಬೆ ಇಟ್ಟುಕೊಂಡು ಚರ್ಚ್ ಗೆ ಭೇಟಿ ಕೊಡುತ್ತಾನೆ ಎಂದು ಏಕವಚನ ಪ್ರಯೋಗ ನಡೆಸಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಸರಿಯಾಗಿ ತೀರ್ಥ ತೆಗೆದುಕೊಳ್ಳಲೂ ಬರದ ರಾಹುಲ್ ತಾನೊಬ್ಬ ಹಿಂದೂ ಎಂದು ನಾಟಕ ಮಾಡುತ್ತಾನೆ ಎಂದು ಅನಂತ ಕುಮಾರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.