ನಮ್ಮ ಹಣ ಮಸೀದಿಗೆ ಯಾಕೆ ಕೊಡ್ತೀರಿ ಸಿದ್ದರಾಮುಲ್ಲಾಖಾನ್? ಅನಂತಕುಮಾರ್ ಹೆಗ್ಡೆ

Krishnaveni K
ಶನಿವಾರ, 24 ಫೆಬ್ರವರಿ 2024 (10:00 IST)
Photo Courtesy: Twitter
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ್ ಹೆಗ್ಡೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮುಲ್ಲಾಖಾನ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೆ ಶೇ.10 ರಷ್ಟು ತೆರಿಗೆ ವಿಧಿಸುವ ಮಸೂದೆ ಪಾಸ್ ಮಾಡಿತ್ತು. ಈ ಬಗ್ಗೆ ವಿಪಕ್ಷ ಬಿಜೆಪಿ ತೀವ್ರ ಟೀಕೆ ಮಾಡಿದೆ. ಇದೀಗ ಸಂಸದ ಅನಂತಕುಮಾರ್ ಹೆಗ್ಡೆ ಕೂಡಾ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಮಸೀದಿಗೆ ಹಣ ಕೊಡುತ್ತೀರಿ. ನಮ್ಮ ದೇವರು ಏನು ಅಪರಾಧ ಮಾಡಿದ್ದಾರೆ? ಶೇ.99 ರಷ್ಟು ಹಿಂದೂಗಳು ತೆರಿಗೆ ಪಾವತಿ ಮಾಡುತ್ತಾರೆ. ಹಿಂದೂಗಳ ಹಣವನ್ನು ಮಸೀದಿ, ಚರ್ಚ್ ಗೆ ನೀಡುತ್ತೀರಿ. ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂದು ನಾವು ಹೋರಾಟಕ್ಕಿಳಿದರೆ ಏನಾಗುತ್ತದೆ? ಹಿಂದೂ ಸಮಾಜದ ಪರ ಮಾತನಾಡುವವರು ಯಾರೂ ಇಲ್ಲ ಎಂದು ಹೀಗೆ ಮಾಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಏನು ನಿಮ್ಮ ಅಪ್ಪನ ಆಸ್ತಿನಾ? ನಮ್ಮ ತೆರಿಗೆ ಹಣ ನಮಗೆ ಕೊಡಿ. ದೇವಸ್ಥಾನಕ್ಕೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಆದರೆ ಮಸೀದಿ, ಚರ್ಚ್ ಗೆ ನೀಡಲು ಹಣವಿದೆ. ರಾಜ್ಯ ಲೂಟಿ ಮಾಡಿ ಮತ ಪಡೆಯಲು ಹೊರಟಿದ್ದಾರೆ. ಸರ್ಕಾರಿ ನೌಕರರಿಗೆ ಕೊಡಲೂ ಹಣವಿಲ್ಲದಷ್ಟು ರಾಜ್ಯ ದಿವಾಳಿಯಾಗಿದೆ ಎಂದು ಅನಂತಕುಮಾರ್ ಟೀಕಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರನ್ನು ಸಿದ್ದರಾಮಯ್ಯ ಅಲ್ಲ, ಸಿದ್ದರಾಮುಲ್ಲಾಖಾನ್ ಎಂದು ಸಂಬೋಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆಂಕೋ ಸಂಸ್ಥೆಯ 'ಸೆನೆಸ್' ಲಕ್ಸುರಿ ಬ್ರ್ಯಾಂಡ್‌ನ ಮೊದಲ ಮಳಿಗೆ ಉದ್ಘಾಟನೆ

ನಮ್ಮ ಮೆಟ್ರೊ ದರ ಪರಿಷ್ಕರಣೆ ಬೆನ್ನಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು

ರಾಜರು ಎಂದು ಪರಿಗಣಿಸಿಕೊಳ್ಳುವವರು ಆರ್ಥಿಕ ಅಸಮಾನತೆ ಬಗ್ಗೆ ಮಾತನಾಡುತ್ತಾರೆ: ಪ್ರಧಾನಿ ಮೋದಿ ತಿರುಗೇಟು

ಅಬ್ಬಬ್ಬಾ, ನಾಗರ ಹಾವಿನೊಂದಿಗೆ ವ್ಯಕ್ತಿಯ ಹುಚ್ಚಾಟ, ಪ್ರಾಣ ಉಳಿದಿದ್ದೆ ಹೆಚ್ಚು, video

ಪ್ರಧಾನಿ ಮೋದಿ ಬಳಿ ಬಂದು ಕಾಂಗ್ರೆಸ್ಸಿಗರು ಗಲಾಟೆ ಮಾಡಲು ಪ್ಲ್ಯಾನ್ ಮಾಡಿದ್ದರು, ಅದಕ್ಕೆ ಬರಬೇಡಿ ಎಂದೆ: ಸ್ಪೀಕರ್ ಓಂ ಬಿರ್ಲಾ

ಮುಂದಿನ ಸುದ್ದಿ
Show comments