ಮಾಲಿನ್ಯ ನಿವಾರಣೆಗೊಂದು ಐಡಿಯಾ

Webdunia
ಸೋಮವಾರ, 1 ನವೆಂಬರ್ 2021 (20:48 IST)
ರಾಷ್ಟ್ರರಾಜಧಾನಿಯಲ್ಲಿ ಚಳಿಗಾಲದ ಕೆಲ ತಿಂಗಳು ಉಸಿರುಗಟ್ಟಿಸುವ ಧೂಳು-ಹೊಗೆಯಲ್ಲಿ ಬದುಕಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಬೆಳೆಕೊಯ್ಲಿನ ನಂತರ ಉಳಿದ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಕ್ರಮ.
ಇದೀಗ ಈ ನಿಟ್ಟಿನಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯ ಪರಿಹಾರದ ಮಾರ್ಗವೊಂದನ್ನು ತೆರೆದಿರಿಸಿದೆ. ಕಲ್ಲಿದ್ದಲು ಉಪಯೋಗಿಸಿಕೊಂಡು ನಡೆಯುವ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಒಂದು ವರ್ಷದ ಅವಧಿಗೆ ಕಲ್ಲಿದ್ದಿಲಿನ ಜತೆ ಶೇ. 5ರಷ್ಟು ಕೃಷಿ ಕಳೆಯನ್ನೂ ಶಾಖೋತ್ಪನ್ನಕ್ಕೆ ಬಳಸಬೇಕು ಎಂದು ನಿರ್ದೇಶಿಸಿದೆ.
ಈ ಹಿನ್ನೆಲೆ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ 8,65,000 ಟನ್ ನಷ್ಟು ಬಯೊಮಾಸ್ ಅನ್ನು ಖರೀದಿ ಮಾಡಲಿದ್ದು, ಈಗಾಗಲೇ ಇದು ಪೂರೈಕೆ ಹಂತದಲ್ಲಿದೆ.
ಅಕ್ಟೋಬರ್ 2021 ರಲ್ಲಿ ವಿದ್ಯುತ್ ನಿಗಮ 65,000 ಟನ್ಗಳ ಹೆಚ್ಚುವರಿ ಖರೀದಿಗೆ ಮುಂದಾಗಿದೆ. 25,00,000 ಟನ್ಗಳ ಸಂಗ್ರಹಣೆಯ ಮತ್ತೊಂದು ಭಾಗವು ಪ್ರಗತಿಯಲ್ಲಿದೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲಿ ಸುಮಾರು 13,01,000 ಟನ್ ಗಳಷ್ಟು ಬಯೋಮಾಸ್ ಸಂಗ್ರವಾಗಿದ್ದು, ನವೆಂಬರ್ ನಲ್ಲಿಯೇ ಇದರ ಖರೀದಿಯೂ ಅಂತಿಮಗೊಳ್ಳಲಿದೆ. ಕೃಷಿಕಳೆಯ ಸಂಗ್ರಹ ಮತ್ತು ಸಂಸ್ಕರಣೆಯಲ್ಲಿರುವ ಯುವ ಉದ್ಯಮಿಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆ ಯೋಜನೆ ರೂಪಿಸುತ್ತಿದೆ.
ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಕೃಷಿಭೂಮಿಯಲ್ಲಿ ತ್ಯಾಜ್ಯಗಳನ್ನು ಸುಡುವ ಪ್ರಮಾಣವು 2021ರ ಇದೇ ಅವಧಿಗೆ ಹೋಲಿಸಿದರೆ 2021ರಲ್ಲಿ ಶೇ.58.3ರಷ್ಟು ಕಡಿಮೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ನಾನು ಹುಟ್ಟು ಕಾಂಗ್ರೆಸಿಗ, ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ: ಡಿಕೆ ಶಿವಕುಮಾರ್‌

ರಾಹುಲ್ ಗಾಂಧಿ ನಾಯಕತ್ವವೇ ಬೇಡ: ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷದಿಂದಲೇ ಬೇಡಿಕೆ

ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣ, ಸಿಬ್ಬಂದಿಗೆ ಢವಢವ

ಮುಂದಿನ ಸುದ್ದಿ
Show comments