Select Your Language

Notifications

webdunia
webdunia
webdunia
webdunia

ಬೆಳಗಿನ ಜಾವ ವಾಯುವಿಹಾರಕ್ಕೆ ಹೊರಟಿದ್ದವರ ಎದುರಿಗೆ ಆನೆ ಬಂತೊಂದಾನೆ

 ಕಾಡಾನೆ

geetha

ಬೆಳಗಾವಿ , ಶನಿವಾರ, 2 ಮಾರ್ಚ್ 2024 (19:07 IST)
ಬೆಳಗಾವಿ :  ಆನೆಯನ್ನು ಕಂಡೊಡನೆಯೇ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಬೆಳಗಿನ ಜಾವ ವಾಯುವಿಹಾರಕ್ಕೆ ಹೊರಟಿದ್ದವರಿಗೆ ಕಾಡಾನೆಯೊಂದು ಎದುರಾಗಿ ತಲ್ಲಣ ಸೃಷ್ಟಿಸಿರುವ ಘಟನೆ ಶುಕ್ರವಾರ ನಸುಕಿನಲ್ಲಿ ಬೆಳಗಾವಿಯಲ್ಲಿ ನಡೆದಿದೆ.ಸುದೈವವಶಾತ್‌ ಘಟನೆಯಲ್ಲಿ ಯಾವುದೆ ಗಾಯ, ನೋವು ಹಾನಿ ಸಂಭವಿಸಿಲ್ಲ. 
 
ಆಹಾರವನ್ನು ಅರಸಿ ಕಾಡಾನೆ ನಗರ ಪ್ರದೇಶಕ್ಕೆ ಬಂದಿರಬಹುದೆಂದು ಶಂಕಿಸಲಾಗಿದ್ದು, ಆನೆಯ ಸೆರೆಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇತ್ತೀಚಿಗಷ್ಟೇ ಚಿರತೆಯೊಂದು ಎಸಗಿದ ದಾಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಗಾಯಗಳುಂಟಾಗಿತ್ತು.  
 
ಆನೆಯ ಚಲನವಲನದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಅರಣ್ಯಾಧಿಕಾರಿಗಳೂ ಸೂಚಿಸಿದ್ದು, ಸೆಲ್ಫಿ ತೆಗೆದುಕೊಳ್ಳುವುದು, ಅಟ್ಟಿಸಿಕೊಂಡು ಹೋಗುವುದು ಮುಂತಾದ ಹುಚ್ಚಾಟಗಳಿಗೆ ಆಸ್ಪದ ನೀಡಬಾರದು ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಪಸಂಖ್ಯಾತರ ಓಲೈಕೆಗಾಗಿ ಭಯೋತ್ಪಾದಕರ ರಕ್ಷಣೆ – ವಿಜಯೇಂದ್ರ