Webdunia - Bharat's app for daily news and videos

Install App

ದೆಹಲಿ ಹೊರಟು ವಾಪಸ್ಸಾದ ಅಮಿತ್ ಶಾ, ಸಿಎಂ ಜೊತೆ ಪ್ರತ್ಯೇಕ ಸಭೆ..!

Webdunia
ಶನಿವಾರ, 22 ಏಪ್ರಿಲ್ 2023 (19:56 IST)
ಖಾಸಗಿ ಕಾರ್ಯಕ್ರಮದಲ್ಲಿ ದೆಹಲಿಗೆ ತೆರಳಬೇಕಾಗಿದ್ದ ಅಮಿತ್ ಶಾ ಮತ್ತೆ ಖಾಸಗಿ ಹೋಟೆಲ್ ಗೆ ಹಿಂತುರುಗಿ ಸಿಂ ಬೊಮ್ಮಾಯಿ‌ ಜೊತೆ ಸಭೆ ನಡೆಸಿದ್ದು ಭಾರಿ ಕುತುಹಲ ಮೂಡಿಸಿತ್ತು. ಅಮಿತ್ ಶಾ ಜೊತೆ ರಾಜ್ಯ ಚುನಾವಣೆ ಉಸ್ತುವಾರಿ ಧರ್ಮೆಂದ್ರ ಪ್ರಧಾನ್ ಮತ್ತೆ ದೆಹಲಿ ಪ್ರಯಾಣ ಮೊಟುಕುಗೊಳಿಸಿ ಸಿಎಂ ಬೊಮ್ಮಾಯಿ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ರು. ನಾಲ್ಕು ಹಂತದಲ್ಲಿ ಪ್ರವಾಸ ಮಾಡಲಿರೋ‌ ಸಿಎಂ ಬಳಿ ಪ್ರವಾಸ ವಿವರ ಪಡೆದು,ರ್ಯಾಲಿಗಿಂತ  ಹೆಚ್ಚು ರೋಡ್ ಶೋ ನಡೆಸುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರಂತೆ.

 ರ್ಯಾಲಿಯುದ್ದಕ್ಕೂ ಸರ್ಕಾರದ ಯೋಜನೆ ಪ್ರಚಾರ ಸೇರಿದಂತೆ ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಜನರಿಗೆ ತಲುಪಿಸುವುದು. ವಿಶೇಷವಾಗಿ ಕಾಂಗ್ರೆಸ್ ನಾಯಕರ ಕಾಂಗ್ರೆಸ್ ಲಿಂಗಾಯತ ಅಸ್ತ್ರಕ್ಕೆ,ಲಿಂಗಾಯತ ನಾಯಕರ ಮೂಲಕವೇ ಉತ್ತರ ನೀಡಿ ಕಾಂಗ್ರೆಸ್ ಅಪಪ್ರಚಾರಕ್ಕೆ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕೆಂಬ ತಂತ್ರ ಉಪಯೋಗಿಸಿ ಅಂತಾ  ಅಮಿತ್  ಶಾ ಸೂಚನೆ ನೀಡಿದ್ದಾರೆ.ಉಳಿದ ಸಂಘಟನಾತ್ಮಕ ವಿಚಾರ ನಾವು ನೋಡಿಕೊಳ್ಳುತ್ತೇವೆ. ಪಕ್ಷದ ವಿಚಾರ,ನಿಲುವು,ಗುರಿಯನ್ನು ಸಮರ್ಥವಾಗಿ ಜನರಿಗೆ ತಲುಪಿಸಿ ಬೆಂಗಳೂರಿಗಿಂತ ಹೆಚ್ಚು ಸಮಯ ಜಿಲ್ಲೆಗಳಲಿದ್ದು ಪ್ರಚಾರ ನಡೆಸುವಂತೆ ಸಿಎಂ ಬೊಮ್ಮಾಯಿ ಅವರಿಗೆ ಅಮಿತ್ ಶಾ ಸಲಹೆ ಸೂಚನೆಗಳನ್ನ ನೀಡಿದ್ದಾರೆಂದು ಹೇಳಲಾಗ್ತಿದೆ.

ಅಮಿತ್ ಶಾ ರಾಜ್ಯ ನಾಯಕರ ಜೊತೆ ಸರಣಿ ಸಭೆಗಳನ್ನ ನಡೆಸಿ ದೆಹಲಿಗೆ ಹಿಂತುರುಗಿದ್ದಾರೆ. ಘಟಾನುಘಟಿ ನಾಯಕರನ್ನ‌ ಕರೆಸಿ ಹೈ ವೋಲ್ಟೇಜ್ ಸಭೆ ನಡೆಸಿ, ಲಿಂಗಾಯತ ಸಮುದಾಯದ ಮತಗಳು ಕೈ ಬಿಡದಂತೆ ನೋಡಿಕೊಳ್ಳುವುದು ಪಕ್ಷ ಬಿಟ್ಟವರನ್ನ ಕಟ್ಟಿ ಹಾಕೋದಕ್ಕೆ ರಣತಂತ್ರ ಹೆಣೆಯುವುದರ ಜೊತೆಗೆ ಕಾಂಗ್ರೆಸ್  ಘಟಾನುಗಟಿ ನಾಯಕರನ್ನ ಸೋಲಿಸೋದಕ್ಕೆ ಕೊಟ್ಟಿರುವ ಸಲಹೆಗಳು ರಣತಂತ್ರಗಳು ಈ ಬಾರಿಯ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರಿಗೆ 5 ರೂ ಕೊಟ್ಟಿಲ್ಲ, ನಿಮ್ಮಪ್ಪ ರಾಜೀನಾಮೆ ಕೊಡ್ಲಿ: ಯತೀಂದ್ರಗೆ ಸಲಹೆ ಕೊಟ್ಟ ಪ್ರತಾಪ್ ಸಿಂಹ

Gold Price today: ಚಿನ್ನದ ಬೆಲೆ ಭಾರೀ ಏರಿಕೆ

ಸೋನಿಯಾ ಗಾಂಧಿ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು

ಒಂದು ಶವಚೀಲದಲ್ಲಿ ಎರಡು ತಲೆ.. ನಮಗೆ ಪೂರ್ತಿ ದೇಹವೇ ಬೇಕು ಕುಟುಂಬಸ್ಥರ ಪಟ್ಟು

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಮುಂದಿನ ಸುದ್ದಿ
Show comments