Publish Date: Tue, 31 Jan 2023 (14:03 IST)
Updated Date: Tue, 31 Jan 2023 (14:06 IST)
ಬೆಳಗಾವಿ : ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಅವರ ನೇತೃತ್ವದಲ್ಲಿ ಬೆಳಗಾವಿ ನಾಯಕರ ಮಹತ್ವದ ಸಭೆ ಶನಿವಾರ ತಡರಾತ್ರಿ ನಡೆದಿದ್ದು, ಹಲವು ಖಡಕ್ ಸೂಚನೆಗಳನ್ನು ನೀಡಲಾಗಿದೆ.
ಬೆಳಗಾವಿ ಭಾಗದ ಬಿಜೆಪಿಯೊಳಗಿನ ಸಂಘರ್ಷ, ರಾಜಕೀಯ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಅಮಿತ್ ಶಾ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರ ಅಂತಿಮ ತೀರ್ಪಿನ ಸಂದೇಶವಿದ್ದ ಸಭೆ ಇದಾಗಿತ್ತು. ಬೆಳಗಾವಿ ಬಣ ರಾಜಕಾರಣಕ್ಕೆ ತೆರೆ ಎಳೆಯುವ ನಿರ್ಧಾರದಿಂದಲೇ ಈ ಮಹತ್ವದ ಸಭೆಯನ್ನು ಅಮಿತ್ ಶಾ ನಡೆಸಿದ್ರು.
ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಅವರು ಸಂಘರ್ಷಕ್ಕೆ ಹೊಲಿಗೆ ಹಾಕುವ ಕಸರತ್ತು ನಡೆಸಿದರು. ಸಭೆಯ ಆರಂಭದಲ್ಲಿ ಅಮಿತ್ ಶಾ ಅವರು, ಬೆಳಗಾವಿ ಬಣ ಬಡಿದಾಟ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ನಂತರ ಮಾತು ಶುರು ಮಾಡಿದ ಅಮಿತ್ ಶಾ ಆರಂಭದಲ್ಲಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ರು. ಪಕ್ಷದ ಬೆಳಗಾವಿ ನಾಯಕರನ್ನು ಹೊಗಳುತ್ತಲೇ ಒಗ್ಗಟ್ಟಿನ ಮಹತ್ವದ ಬಗ್ಗೆ ಪಾಠ ಮಾಡಿದ್ರು. ನಂತರ ಗಂಭೀರವಾದ ಅಮಿತ್ ಶಾ ಬೆಳಗಾವಿ ನಾಯಕರಿಗೆ ಫೈನಲ್ ವಾರ್ನಿಂಗ್ ಕೊಟ್ಟರು ಎನ್ನಲಾಗಿದೆ.