Webdunia - Bharat's app for daily news and videos

Install App

ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬಗಳು ಪರಿಸರಸ್ನೇಹಿ ಮತ್ತು ಮಾನವರಿಗೆ ಹಿತಕಾರಿ

Webdunia
ಬುಧವಾರ, 3 ನವೆಂಬರ್ 2021 (22:12 IST)
ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬಗಳು, ಉತ್ಸವಗಳು ಮತ್ತು ವ್ರತಗಳು ಪರಿಸರಸ್ನೇಹಿ ಮತ್ತು ಮಾನವರಿಗೆ ಹಿತಕಾರಿ ಆಗಿರುತ್ತದೆ; ಆದರೆ ಕಮ್ಯುನಿಸ್ಟರು (ಸಾಮ್ಯವಾದಿಗಳು), ಜಿಹಾದಿಗಳು, ಮಿಷನರಿಗಳು, ಸಿನಿಮಾ ನಟರು, ಜಾತ್ಯತೀತರು ಮತ್ತು ನಾಸ್ತಿಕರು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಚಳುವಳಿಗಳನ್ನು ನಡೆಸುತ್ತಿದ್ದಾರೆ. 'ಪಿಕೆ' ಚಲನಚಿತ್ರದಲ್ಲಿ ನಟ ಅಮೀರ್ ಖಾನ್, 'ಕಲ್ಲು (ಶಿವಲಿಂಗ) ಹಾಲು ಕುಡಿಯುವುದಿಲ್ಲ, ಬಡವರಿಗೆ ಕೊಡಿ', ಎನ್ನುತ್ತಾನೆ; ಆದರೆ ಆತ 'ಸತ್ತವರಿಗೆ ಚಳಿ ಆಗುವುದಿಲ್ಲ, ಹಾಗಾದರೆ ಮಜಾರ್(ಗೋರಿಗಳ) ಮೇಲೆ ಚಾದರ ಏಕೆ ಹೊದಿಸಬೇಕು ? ಬಡವರಿಗೆ ನೀಡಿ', ಎಂದು ಏಕೆ ಹೇಳುವುದಿಲ್ಲ ? ಹೋಳಿ ಬಂತೆಂದರೆ, 'ನೀರನ್ನು ಉಳಿಸಿ', ದೀಪಾವಳಿ ಬಂತೆಂದರೆ 'ವಾಯು ಮಾಲಿನ್ಯ ತಡೆಗಟ್ಟಿ', ಎಂದು ಪ್ರತಿ ಹಬ್ಬದಲ್ಲಿ ಪ್ರಸಾರವಾಗುತ್ತದೆ. 'ಪೇಟಾ' (PETA)ದವರು, 'ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸಬೇಡಿ; ಏಕೆಂದರೆ ಗಾಳಿಪಟದಿಂದ ಪಕ್ಷಿಗಳು ಸಾಯುತ್ತವೆ' ಎನ್ನುತ್ತಾರೆ. ಆದರೆ, ವರ್ಷವಿಡೀ ಮೊಬೈಲ್ ಫೋನ್ ಬಳಕೆಯಿಂದ ಅತಿ ಹೆಚ್ಚು ಪಕ್ಷಿಗಳು ಸಾಯುತ್ತವೆ. ಅವರು ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ ? 
 
 
ಬೆಂಗಳೂರು: ಜಾಹೀರಾತುಗಳ ಮೂಲಕ ಅಪಪ್ರಚಾರ ಹರಡುವವರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಬೇಕು. ಹೀಗೆ ಮಾಡಿದರೆ ಹಿಂದೂ ಧರ್ಮವನ್ನು ಯಾರೂ ವಕ್ರದೃಷ್ಟಿಯಿಂದ ನೋಡುವುದಿಲ್ಲ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ ಪ್ರತಿಪಾದಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಯುವ ಹಿಂದೂ ಹಬ್ಬಗಳ ಅಪಪ್ರಚಾರ ಮತ್ತು ಹಬ್ಬಗಳ ಪ್ರಸ್ತುತ ವಿಷಯದ ಕುರಿತು ನಡೆದ ವಿಶೇಷ 'ಆನ್‌ಲೈನ್' ಚರ್ಚಾಕೂಟದಲ್ಲಿ ಅವರು ಮಾತನಾಡಿದರು, ಹಿಂದೂಗಳ ಸಂಘಟಿತರಾಗಿ ಹಿಂದೂ ಧರ್ಮವಿರೋಧಕರ ಆಕ್ಷೇಪಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೈದ್ಧಾಂತಿಕವಾಗಿ ಖಂಡಿಸಬೇಕು.
ಜಯಪುರದ ಜ್ಞಾನಂ ಫೌಂಡೇಶನ್ ನ ಸಂಸ್ಥಾಪಕ ದೀಪಕ ಗೋಸ್ವಾಮಿ ಮಾತನಾಡಿ, ಚಲನಚಿತ್ರಗಳಲ್ಲಿಯೂ ಹಿಂದೂ ಧರ್ಮವನ್ನು ಉದ್ದೇಶಿಸಲಾಗುತ್ತಿದೆ. ಅರ್ಚಕರನ್ನು ಅಚಾರಿಕವಾಗಿ ಬಿಂಬಿಸಲಾಗುತ್ತಿದ್ದು, ಕುಖ್ಯಾತ ಗೂಂಡಾನನ್ನು 'ಜಯಭವಾನಿ' ಎಂದು ಹೇಳಿ ಭಕ್ತನಂತೆ ಬಿಂಬಿಸಲು ಸಾಧ್ಯವಾಯಿತು. ಇದರಿಂದ ಹಿಂದೂಗಳು ಗೊಂದಲಕ್ಕೀಡಾಗಿ ಧರ್ಮದಿಂದ ದೂರ ಸರಿಯುತ್ತಾರೆ. ಹಿಂದೂಗಳಿಗೆ ಧರ್ಮದ ಬಗ್ಗೆ ಯೋಗ್ಯ ಶಿಕ್ಷಣವನ್ನು ನೀಡಿದರೆ, ಅವರು ಇಂತಹ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Bakrid: ಅಲ್ಲಾಹನಿಗಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ, ಆರೋಪಿಗಳ ಬಾಯಿಂದ್ದ ಬೆಚ್ಚಿಬೀಳಿಸುವ ಮಾಹಿತಿ ಹೊರಕ್ಕೆ

Covid 19: ದೇಶದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೀಗಿದೆ

ಮುಂದಿನ ಸುದ್ದಿ
Show comments