Webdunia - Bharat's app for daily news and videos

Install App

ತಬ್ಲಿಘಿ ಮರೆಯುವ ಮುನ್ನವೇ ಈಗ ಅಜ್ಮೇರ್ ಕಾಟ ಶುರು

Webdunia
ಭಾನುವಾರ, 10 ಮೇ 2020 (13:35 IST)
ಹೊಸದಾಗಿ ಒಂದೇ ದಿನ 22 ಕೊರೊನಾ ವೈರಸ್ ಕೇಸ್ ಗಳು ದೃಢಪಟ್ಟಿದ್ದು, ಆ ಮೂಲಕ 107 ಕ್ಕೆ ಸೋಂಕಿತರ ಸಂಖ್ಯೆ ಈ ಜಿಲ್ಲೆಯಲ್ಲಿ ಏರಿಕೆಯಾಗಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ , ಬೆಳಗಾವಿ ಜಿಲ್ಲೆಯಲ್ಲಿ ಅಜ್ಮೇರದಿಂದ ಬೆಳಗಾವಿಗೆ ಮರಳಿಬಂದ 22 ಜನರಿಗೆ ಕೊರೋನಾ ಸೋಂಕು ಇರುವದು ದೃಢವಾಗಿದೆ.

ಹೊಸದಾಗಿ ದೃಢಪಟ್ಟ  22 ಸೋಂಕಿತರು  ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ಭಾಗದವರಾಗಿದ್ದಾರೆ.

ತಬ್ಲೀಘಿ ಜಮಾತಿನ ನಂಟಿನ ಬಳಿಕ ಈಗ ಬೆಳಗಾವಿ ಜಿಲ್ಲೆಗೆ ಅಜ್ಮೇರ್ ದಿಂದ ಮರಳಿದವರ ನಂಟು ಶುರುವಾಗಿದೆ. ಅಜ್ಮೇರ್ ದರ್ಗಾ ದರ್ಶನಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಜನರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಕೆಲವು ದಿನಗಳ ಹಿಂದೆ ಅಜ್ಮೇರದಿಂದ ಬೆಳಗಾವಿ ಗಡಿ ಪ್ರವೇಶ ಮಾಡಿದ ಇವರನ್ನು ತವನಿಧಿ ಘಾಟ್ ನಲ್ಲಿರುವ ಮುರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಅಜ್ಮೇರ್ ನಲ್ಲಿ ಇವರನ್ನು 40 ದಿನಗಳ ಕಾಲ  ಕ್ವಾರಂಟೈನ್ ಮಾಡಲಾಗಿತ್ತು. ಬೆಳಗಾವಿ ಗಡಿ ಪ್ರವೇಶ ಮಾಡಿದ ತಕ್ಷಣ
ಇವರನ್ನು  ನಿಪ್ಪಾಣಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಡಲಾಗಿತ್ತು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments