Webdunia - Bharat's app for daily news and videos

Install App

ತಮಿಳುನಾಡು ಬಳಿಕ ಕರ್ನಾಟಕದಲ್ಲೂ ಬದಲಾಗುತ್ತಾ ರೂಪಾಯಿ ಚಿಹ್ನೆ: ಇದು ಸರೀನಾ

Krishnaveni K
ಶನಿವಾರ, 15 ಮಾರ್ಚ್ 2025 (10:45 IST)
Photo Credit: X
ಬೆಂಗಳೂರು: ಕೇಂದ್ರದ ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಡಿಎಂಕೆ ತಮಿಳುನಾಡು ಬಜೆಟ್ ನಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳುಭಾಷೆಯಲ್ಲೇ ಹಾಕಿಕೊಂಡಿತ್ತು. ಇದೀಗ ಕರ್ನಾಟಕದಲ್ಲೂ ಬದಲಾವಣೆಯಾಗುತ್ತಾ ಎಂಬ ಅನುಮಾನ ಮೂಡಿದೆ.

ಕೇಂದ್ರದ ವಿರುದ್ಧ ತಿರುಗಿ ಬಿದ್ದಿರುವ ಡಿಎಂಕೆ, ಒಂದು ಕಾಲದಲ್ಲಿ ತನ್ನದೇ ಪಕ್ಷದ ನಾಯಕ ಅನುಮೋದಿಸಿದ್ದ ರೂಪಾಯಿ ಚಿಹ್ನೆಯನ್ನು ಬಹಿಷ್ಕರಿಸಿ ತಮಿಳಿನಲ್ಲಿಯೇ ರೂಪಾಯಿ ಚಿಹ್ನೆ ಬರೆದುಕೊಂಡಿತ್ತು. ಇದು ಹಿಂದಿ ಹೇರಿಕೆ ಎನ್ನುವುದು ಡಿಎಂಕೆ ವಾದವಾಗಿದೆ.

ಇದೀಗ ಕರ್ನಾಟಕದಲ್ಲೂ ಬದಲಾವಣೆಯಾಗಬೇಕು ಎಂದು ಕೆಲವು ಕನ್ನಡ ಪರ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ನಮಗೆ ಹಿಂದಿ ಬೇಡ, ಕನ್ನಡ ಅದಕ್ಕಿಂತಲೂ ಹಳೆಯ ಭಾಷೆ. ಕನ್ನಡದಲ್ಲೇ ರೂ. ಚಿಹ್ನೆ ಬಳಸೋಣ ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಡಿಎಂಕೆ ನಾಯಕರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಕೇಂದ್ರದ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಈಗ ಕರ್ನಾಟಕದಲ್ಲೂ ಸರ್ಕಾರವೇ ರೂಪಾಯಿ ಚಿಹ್ನೆ ಕನ್ನಡಕ್ಕೆ ಬದಲಾವಣೆ ಮಾಡುತ್ತಾ ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments