Webdunia - Bharat's app for daily news and videos

Install App

ಚಂದ್ರನಿಗೆ ಮುತ್ತಿಟ್ಟ ಬೆನ್ನಲ್ಲೇ ಸೂರ್ಯನ ಸಂಶೋಧನೆಗೆ ಸಜ್ಜದ ಇಸ್ರೋ

Webdunia
ಶುಕ್ರವಾರ, 25 ಆಗಸ್ಟ್ 2023 (14:46 IST)
ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು   ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ ೩, ಲ್ಯಾಂಡಿಂಗ್ ಯಶಸ್ವಿಯಾಗಿದೆ, ಹಾಗಾದ್ರೆ ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದಿರುವ ಪ್ರಜ್ಞಾನ್ ರೋವರ್ ೧೪ ದಿನಗಳವರೆಗೆ ಚಂದ್ರನ ಅಂಗಳದಲ್ಲಿ ಏನೆಲ್ಲಾ ಸಂಶೋಧನೆ ನಡೆಸುತ್ತೆ, ಜೊತೆಗೆ ಇಸ್ರೋ ಯಶಸ್ವಿಯಾದ ಬೆನ್ನಲ್ಲೇ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಇಸ್ರೋ ಮುಂದಾಗ್ತಿದೆ,ಜೂಲೈ ೧೪ ರಂದು ಶ್ರೀಹರಿಕೋಟಾದ ಬಾಹ್ಯಾಕಾಶದಿಂದ ಸರಿಯಾಗಿ ಮಾಧ್ಯಾಹ್ನ  2:35 ಕ್ಕೆ ಉಡಾವಣೆ ಯಾಗಿದ್ದ ರಾಕೆಟ್ ಸತತವಾಗಿ 41 ದಿನಗಳ ಕಾಲ ನಿರಂತರವಾಗಿ ಚಂದ್ರ ನತ್ತ ಕ್ರಮಿಸಿ ಚಂದ್ರನ ಅಂಗಳದಲ್ಲಿ ಇಳಿದು ಯಶಸ್ವಿ ಕಂಡಿದೆ.

ಇನ್ನೂ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಅಧ್ಯಯನ ಆರಂಭಿಸಿದ್ದು, ಪ್ರಮುಖವಾಗಿ ಚಂದ್ರನ ಮೇಲೆ ಮುಂದಿನ 14 ದಿನಗಳವರೆಗೆ ಸಂಶೋಧನೆ ನಡೆಸಲಿದೆ,
ಪ್ರಜ್ಞಾನ್ ರೋವರ್ ಹೊರಬಂದ ತಕ್ಷಣ, ಪ್ರಮುಖ ತನಿಖೆಗಳು ನಡೆಯಲಿವೆ. ಮೊದಲ ಸಂಶೋಧನೆಯ ಭಾಗವಾಗಿ, ಚಂದ್ರನ ಮೇಲಿನ ನೆಲದ ಕಂಪನಗಳ ಅಂಶಗಳನ್ನು ಗುರುತಿಸುತ್ತದೆ.ಜೊತೆಗೆ ರಾಸಾಯನಿಕ ಸಂಯೋಜನೆಯ ಉಷ್ಣತೆಯ ಅದ್ಯಯನ ಮಾಡಲಾಗುತ್ತದೆ,ಮತ್ತು ಅಲ್ಲಿ ಇರುವ ವಿಕಿರಣಶೀಲ ವಸ್ತುಗಳನ್ನು ಹೊರಸೂಸುವ ಆಲ್ಫಾ ಕಣಗಳು. ಮೇಲ್ಮೈಯಲ್ಲಿರುವ ಕ್ಷ-ಕಿರಣಗಳು ಫ್ಲೋರೋಸೆನ್ಸ್ ಅನ್ನು ಸೃಷ್ಟಿಸುತ್ತವೆ,ಇದರ ಜೊತೆಗೆ ಖನಿಜಗಳು ಅನ್ವೇಷಣೆಯ ಕಾರ್ಯ ನಡೆಯುತ್ತದೆ ಅಂತಾ ನೆಹರು ತಾರಾಲಯದ ವಿಜ್ಞಾನಿ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಚಂದ್ರನಿಗೆ ಮುತ್ತಿಟ್ಟು ಯಶಸ್ವಿಯಾಗಿರುವ ವಿಕ್ರಮ್ ಲ್ಯಾಂಡರ್  ಯಶಸ್ವಿಯಾಗಿ ಇತಿಹಾಸದ ಪುಟ ಸೇರಿದೆ,ಇದರ ಬೆನ್ನಲ್ಲೇ  ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸೂರ್ಯನ ಅಧ್ಯಯನಕ್ಕಾಗಿ ಮಿಷನ್ ಆದಿತ್ಯ-ಎಲ್ ೧, ಭಾರತ ಸೂರ್ಯನ ಅಧ್ಯಯನಕ್ಕಾಗಿ ಕೈಗೊಳ್ಳುತ್ತಿರುವ ಮೊದಲ ಮಿಷನ್ ಆಗಿದೆ.ಇದು ಸೂರ್ಯನನ್ನು ಅಧ್ಯಯನ ಮಾಡುವ ಮಿಷನ್ ಆದಿತ್ಯ ಎಲ್ ೧ ರ ಉಡಾವಣೆಯಾಗಿರುತ್ತದೆ ಇದು ಭೂಮಿಯಿಂದ ಸರಿಸುಮಾರು ೧೫ ಲಕ್ಷ ಕೀ.ಮೀಟರ್‌ಗಳಷ್ಟು ದೂರ ಹೋಗಿ ಸೂರ್ಯನ ಚಲನ ವಲನಗಳ ಅಧ್ಯಯನ ನಡೆಸಲು ಸಜ್ಜಾಗ್ತಿದೆ.ಒಟ್ಟಾರೆ ಚಂದ್ರಯಾನ ೩ ವಿಕ್ರಮ್ ಲ್ಯಾಂಡರ್ ಬುಧವಾರ ಸಂಜೆ ಯಶಸ್ವಿಯಾಗಿ ಇತಿಹಾಸದ ಪುಟ ಸೇರಿ ಭಾರತ ಮುಂದುವರೆದ ರಾಷ್ಟ್ರವಾಗಿ ಹೊರ ಹೊಮ್ಮಿದೆ, ಇದೀಗ ಇಸ್ರೋ ವಿಜ್ಞಾನಿಗಳ ಕೆಲಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತದೆ,

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments