Webdunia - Bharat's app for daily news and videos

Install App

ನಟಿ ರಮ್ಯಾಗೆ ಓಪನ್ ಛಾಲೆಂಜ್: ಧಮ್ ಇದ್ರೆ ಠೇವಣಿ ಉಳಿಸಿಕೊಳ್ಳಿ ಎಂದವರಾರು?

Webdunia
ಶನಿವಾರ, 19 ಜನವರಿ 2019 (19:51 IST)
ಸ್ಯಾಂಡಲ್ ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಧಮ್ ಇದ್ರೆ ಸ್ಪರ್ಧೆ ಮಾಡಿ ಠೇವಣಿ ಉಳಿಸಿಕೊಳ್ಳಬೇಕು. ಹೀಗಂತ ಬಹಿರಂಗ ಚಾಲೆಂಜ್ ಹಾಕಲಾಗಿದೆ.

ಸ್ಯಾಂಡಲ್ ವುಡ್ ನಟಿ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಗೆ ಬಹಿರಂಗ ಆಹ್ವಾನ ನೀಡಲಾಗಿದೆ. ಮಂಡ್ಯ ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ್ , ರಮ್ಯಾಗೆ ಚಾಲೆಂಜ್ ಹಾಕಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ರಮ್ಯಾ ಟ್ವೀಟ್ ಹಿನ್ನೆಲೆಯಲ್ಲಿ ರಮ್ಯಾ ವಿರುದ್ಧ ಬಿಜೆಪಿಗರ ಆಕ್ರೋಶ ಹೆಚ್ಚುತ್ತಿದೆ.
ನೋಟು ಅಮಾನ್ಯೀಕರಣದ ವಿರುದ್ಧ ಟ್ವೀಟ್ ಮಾಡಿದ್ದ ರಮ್ಯಾ ಕ್ರಮಕ್ಕೆ ಬಿಜೆಪಿಗರು ಗರಂ ಆಗಿದ್ದಾರೆ.

ರಮ್ಯಾರಂತಹ ಸೋಗಲಾಡಿ ರಾಜಕಾರಣಿಗಳಿಂದ ಮೋದಿ ರಾಜಕೀಯ ಕಲಿಯಬೇಕಿಲ್ಲ. ಅಂಬಿ ಅಂಕಲ್ ಅಂತಿದ್ದ ಇವ್ರು ಸತ್ತಾಗ ಅಂಬಿ ದರ್ಶನ ಪಡೆದಿಲ್ಲ. ರಾತ್ರೋರಾತ್ರಿ ಮನೆಖಾಲಿ ಮಾಡಿ ಓಡಿ ಹೋದವರು ಎಂದು ಲೇವಡಿ ಮಾಡಿದರು.

ಲೈಕ್, ಕಾಮೆಂಟ್ ಮಾಡೋ ತೆವಲಿಗೆ ಮೋದಿ ವಿರುದ್ಧ ಟ್ವೀಟ್ ಮಾಡ್ತೀರಾ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.  



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments