Select Your Language

Notifications

webdunia
webdunia
webdunia
webdunia

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರಕ್ಕೆ ತೆರಳಿ ಪೇಚಿಗೆ ಸಿಲುಕಿದ ನಟಿ ಪೂಜಾಗಾಂಧಿ

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರಕ್ಕೆ ತೆರಳಿ ಪೇಚಿಗೆ ಸಿಲುಕಿದ ನಟಿ ಪೂಜಾಗಾಂಧಿ
ಶಿವಮೊಗ್ಗ , ಮಂಗಳವಾರ, 30 ಅಕ್ಟೋಬರ್ 2018 (06:57 IST)
ಶಿವಮೊಗ್ಗ : ರಾಜ್ಯ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಟಿ ಪೂಜಾಗಾಂಧಿ ಅವರು ಜೆಡಿಎಸ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬಳಿಂದ ಪೇಚಿಗೆ ಸಿಲುಕಿದ್ದಾರೆ.


ನಟಿ ಪೂಜಾಗಾಂಧಿ ಎಸ್.ಎನ್. ಮಾರ್ಕೆಟ್ ನಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತ ಯಾಚನೆ ಮಾಡಲು ಬಂದಿದ್ದರು. ಆ ವೇಳೆ ಅಲ್ಲಿದ್ದ ವ್ಯಾಪಾರಿ ಮಹಿಳೆಯೊಬ್ಬಳು ಸಿಲಿಂಡರ್ ರೇಟ್ ಹೆಚ್ಚಾಗಿದೆ, ಡೀಸೆಲ್, ಪೆಟ್ರೋಲ್ ರೇಟು ಹೆಚ್ಚಾಗಿದೆ. ಗಾಂಧಿ ಬಜಾರ್ ನಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡುತ್ತಿಲ್ಲ. ಈಗ ವೋಟ್ ಕೇಳುವುದಕ್ಕೆ ಬಂದಿದ್ದೀರಿ ಎಂದು ನಟಿ ಪೂಜಾಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.


ಈ ಸಂದರ್ಭದಲ್ಲಿ ಮಹಿಳೆಗೆ ಸಮಾಧಾನ ಮಾಡುವಲ್ಲಿ ಪೂಜಾಗಾಂಧಿ ಸೋತಿದ್ದು, ಬಳಿಕ ಸ್ಥಳಿಯ ಮುಖಂಡರು ವ್ಯಾಪಾರಿ ಮಹಿಳೆಗೆ ಸಮಾಧಾನ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಪಕ್ಷಗಳ ಮುಖಂಡರ ಜಂಟಿ ಪ್ರಚಾರ