Webdunia - Bharat's app for daily news and videos

Install App

ಅರ್ಜುನ ಆನೆ ಹೆಸರಿನಲ್ಲಿ ನಟ ದರ್ಶನ್ ಗೆ ವಂಚನೆ

Krishnaveni K
ಸೋಮವಾರ, 27 ಮೇ 2024 (12:02 IST)
ಬೆಂಗಳೂರು: ಮೈಸೂರಿನ ಅಂಬಾರಿ ಆನೆ ಅರ್ಜುನನ ಸಮಾಧಿ ನಿರ್ಮಾಣ ವಿಚಾರದಲ್ಲಿ ನಟ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಓರ್ವ ವ್ಯಕ್ತಿ ಸೋಷಿಯಲ್ ಮೀಡಿಯಾ ಮೂಲಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ನಟ ದರ್ಶನ್ ಅಂಬಾರಿ ಆನೆಗೆ ಸಮಾಧಿ ಕಟ್ಟಲು ಮುಂದಾಗಿದ್ದರು. ಇದಕ್ಕಾಗಿ 30 ಸಾವಿರ ರೂ. ಮೌಲ್ಯದ ಕಲ್ಲನ್ನು ಸಮಾಧಿ ಬಳಿ ತರಿಸಿ ಹಾಕಿದ್ದರು. ಆದರೆ ಇದರ ನಡುವೆ ಅರಣ್ಯ ಇಲಾಖೆ ಈ ಹಣವನ್ನು ದರ್ಶನ್ ಮರಳಿಸಿ ತಾನೇ ಸಮಾಧಿ ಕಟ್ಟಲು ಮುಂದಾಗಿದೆ ಎಂದು ವರದಿಯಾಗಿತ್ತು. ಆದರೆ ಅಸಲಿ ಕತೆ ಬೇರೇನೇ ಇದೆ.

ನವೀನ್ ಎಂಬ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಅರ್ಜುನ ಪಡೆ ಎಂದು ವ್ಯಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಹಣ ಸಂಗ್ರಹಣೆ ಮಾಡುತ್ತಿದ್ದಾನೆ. ಈತನ ಮಾತು ನಂಬಿ ಅನೇಕರು ಹಣ ಕಳುಹಿಸಿದ್ದಾರೆ. ಇದರಿಂದ ಆತ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದಾನೆ. ಅಷ್ಟೇ ಅಲ್ಲ, ದರ್ಶನ್ ಪಿಎಯನ್ನೂ ಸಂಪರ್ಕಿಸಿ ಕಲ್ಲು ತರಿಸಿಕೊಂಡಿದ್ದಾನೆ. ಬಳಿಕ ಅದೇ ಕಲ್ಲನ್ನು ಅರಣ್ಯ ಇಲಾಖೆಗೆ ಮಾರಿ 30 ಸಾವಿರ ರೂ. ಪೀಕಿದ್ದಾನೆ ಎಂದು ತಿಳಿದುಬಂದಿದೆ.

ದರ್ಶನ್ ಏನೋ ಒಳ್ಳೆಯ ಉದ್ದೇಶದಿಂದ ಸಮಾಧಿ ಕಟ್ಟಲು ಸಹಾಯ ಮಾಡಿದ್ದಾರೆ. ಆದರೆ ಅವರ ಅಭಿಮಾನಿ ಎಂದು ಹೇಳಿಕೊಂಡು ಇಲ್ಲೊಬ್ಬವಂಚಕ ಜನರಿಗೇ ಟೋಪಿ ಹಾಕಲು ಪ್ರಯತ್ನಿಸುತ್ತಿದ್ದಾನೆ. ಇಂತಹವರ ಬಗ್ಗೆ ಎಚ್ಚರವಾಗಿರಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments