Select Your Language

Notifications

webdunia
webdunia
webdunia
webdunia

ಮಗಳ ನಿಶ್ಚಿತಾರ್ಥ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅಪಘಾತ: ವಧು ಸೇರಿದಂತೆ ಐವರು ಸಾವು

ರಸ್ತೆ ಅಪಘಾತ

Sampriya

ಹುಬ್ಬಳ್ಳಿ , ಮಂಗಳವಾರ, 6 ಮೇ 2025 (16:00 IST)
ಮಗಳ ನಿಶ್ಚಿತಾರ್ಥ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಸಂಭವಿಸಿದ ಅ‍ಘಾತದಲ್ಲಿ ವಧು ಸೇರಿದಂತೆ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.  

ಮಂಗಳವಾರ ಬೆಳಗಿನ ಜಾವ ತಾಲೂಕಿನ ಕಿರೇಸೂರ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ.

ಅಪಘಾತದಲ್ಲಿ ಮೃತ ಪಟ್ಟ ವಿಠಲ್ ಶೆಟ್ಟಿ ಅವರು ಕುಳಗೇರಿ ಕ್ರಾಸ್ ನಲ್ಲಿ ಕಳೆದ ಮೂರು ದಶಕಗಳಿಂದ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಅವರ ಮಗಳಾದ ಶ್ವೇತಾ ಶೆಟ್ಟಿ ನಿಶ್ಚಿತಾರ್ಥಕ್ಕೆಂದು ಶಿವಮೊಗ್ಗ ಸಾಗರ ತಾಲೂಕಿನ ಹಾವಿನಹಳ್ಳಿ ಮೂರ್ಪಿಗೆ ತೆರಳಿದ್ದ ಅವರು ಮರಳಿ ಊರಿಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.


ವಿಠಲ್ ಅವರಿಗೆ ಐವರು ಸಹೋದರರು ಇದ್ದಾರೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ನರಗುಂದದ ತಲಾಟೆ ಅಂಜಲಿ ಅವರು ಸಹ ಇದ್ದರು ಎಂದು ಮೃತ ಪಟ್ಟ ವಿಠಲ್ ಅವರ ಪರಿಚಯಸ್ಥರು ಮಾಹಿತಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಜಮ್ಮು ಕಾಶ್ಮೀರ ಭೇಟಿ ರದ್ದಿಗೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ