Webdunia - Bharat's app for daily news and videos

Install App

ಇಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದವ ಭೀಕರವಾಗಿ ಸತ್ತುಬಿಟ್ಟ!

Webdunia
ಮಂಗಳವಾರ, 11 ಡಿಸೆಂಬರ್ 2018 (14:55 IST)
ಆತ ಎಂದಿನಂತೆ ಇಟ್ಟಿಗೆಗಳನ್ನು ತುಂಬಿಕೊಂಡು ವಾಹನ ಚಲಾಯಿಸುತ್ತಿದ್ದ. ಆದರೆ ಆತನ ಬಾಳಲ್ಲಿ ವಿಧಿ ಆಟವೇ ಬೇರೆಯಾಗಿತ್ತು. ಚಲಿಸುತ್ತಿದ್ದ ವಾಹನದಲ್ಲಿಯೇ ಭೀಕರವಾಗಿ ಸಾವನ್ನಪ್ಪಿದ್ದಾನೆ.

ಟ್ರಾಕ್ಟರ್ ಇಂಜಿನ್ ಮುಗುಚಿ ಚಾಲಕ ಸಾವನ್ನಪ್ಪಿದ್ದಾನೆ. ಮಧುಗಿರಿ ಪಟ್ಟಣದ ಸಮೀಪ ಇರುವ ವಾಲ್ಮೀಕಿ ಬಡಾವಣೆಯಲ್ಲಿ ಅಪಘಾತ ಸಂಭವಿಸಿದೆ. ಇಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ  ಟ್ರಾಕ್ಟರ್ ಇಂಜಿನ್ ಮುಗುಚಿ ಈ ಘಟನೆ ನಡೆದಿದೆ.  
ತುಮಕೂರು ಜಿಲ್ಲೆಯ ಪುರವರ ಗ್ರಾಮದ ನಿವಾಸಿ ಟ್ಯಾಕ್ಟರ್ ಚಾಲಕ ರಂಗನಾಥ್ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇಂಜಿನ್ ಹಾಗೂ ಟ್ರೈಲರ್ ನಡುವೆ ಸಿಲುಕಿ ಚಾಲಕ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ. ಟ್ರಾಕ್ಟರ್ ನಲ್ಲಿದ್ದ  ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ.

ಅರಳಾಪುರದಿಂದ ಮಧುಗಿರಿಗೆ ಇಟ್ಟಿಗೆ ತುಂಬಿಕೊಂಡು ಬಂದಿದ್ದ ಟ್ರಾಕ್ಟರ್ ಇದಾಗಿತ್ತು. ಟ್ರಾಕ್ಟರ್ ಇಂಜಿನ್ ಹಾಗೂ ಟ್ರೈಲರ್ ನಡುವೆ ಸಿಲುಕಿರುವ ಮೃತದೇಹವನ್ನು ಜೆಸಿಬಿ ಬಳಸಿ ಹೊರತೆಗೆಯಲಾಯಿತು. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್‌ ಕಟ್ಟಡ: 15 ಮಂದಿ ಸಜೀವ ದಹನ, ಹಲವರಿಗೆ ಗಾಯ

ಶೀಘ್ರದಲ್ಲೇ ಮೂರು ತಿಂಗಳ ಗೃಹಲಕ್ಷ್ಮಿ ಹಣ ರಿಲೀಸ್‌: ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು

ಭಾರತ ಬಿಟ್ಟು ತೊಲಗಿ ಆದೇಶ: ಅಟ್ಟಾರಿ-ವಾಘಾ ಗಡಿಯಲ್ಲಿ 786 ಪಾಕ್‌ ಪ್ರಜೆಗಳಿಗೆ ಗೇಟ್‌ಪಾಸ್‌

Karnataka Weather: ರಾಜ್ಯದ ಈ ಪ್ರದೇಶಗಳಲ್ಲಿ ಇಂದು ಮಳೆ ಬರುವುದು ಪಕ್ಕಾ

ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವಂ ವೇಳೆ ಗೋಡೆ ಕುಸಿದು ಎಂಟು ಭಕ್ತರು ಸಾವು

ಮುಂದಿನ ಸುದ್ದಿ
Show comments