Select Your Language

Notifications

webdunia
webdunia
webdunia
webdunia

ವರದಿ ಸ್ವೀಕಾರ ಕೇವಲ ರಾಜಕೀಯ ಮಾತ್ರ-ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಬಸವರಾಜ್ ಬೊಮ್ಮಾಯಿ

geetha

bangalore , ಭಾನುವಾರ, 3 ಮಾರ್ಚ್ 2024 (11:22 IST)
ಬೆಂಗಳೂರು-ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷ ಅಂತ ಜಾತಿ ಮೇಲೆ ಎಲ್ಲಿಲ್ಲದ ಪ್ರೀತಿ ಬರುತ್ತೆ‌.ಜಾತಿ ಸಮಾವೇಶ ಮಾಡೋದು, ಜಾತಿ ಜಾತಿಗಳ ಬಗ್ಗೆ ಮಾತಾಡ್ತಾರೆ.2015ರಲ್ಲಿ ಸಿದ್ದರಾಮಯ್ಯ ಅವರು ಎಲ್ಲಾ ಜಾತಿಗಳ ಅಧ್ಯಯನ ಮಾಡಿ ಅಂತ ಕಾಂತರಾಜ ಕಮಿಟಿ ಮಾಡಿದ್ರು.ಜಾತಿ ಜನಗಣತಿ ಮಾಡೋದು ಕೇಂದ್ರದ ಅಧಿಕಾರ ಅಂತ ಸುಪ್ರೀಂ ಕೋರ್ಟ್ ನಲ್ಲಿ 6 ಕೇಸಿದೆ.ಸುಪ್ರೀಂ ಕೇಸ್ ನಿರ್ಣಯ ಆಗಬೇಕು ಅದನ್ನ ತಪ್ಪಿಸಲು ಜಾತಿ ಗಣತಿ ಅನ್ನೋದು ಬಿಟ್ಟು, ಶೈಕ್ಷಣಿಕ ಜನಗಣತಿ ಅಂತ ಮಾಡಿದ್ರು.ಒಳ ಉದ್ದೇಶ ಒಂದು, ಹೊರ ಉದ್ದೇಶ ಒಂದು.ಸಿದ್ದರಾಮಯ್ಯ ಅವರು ಸಿಎಂ ಇದ್ರು,

ವರದಿ ಸ್ವೀಕಾರ ಮಾಡಲಿಲ್ಲ.ಮುಂದೆ ವರದಿ ಬಗ್ಗೆ ಸಾಕಷ್ಟು ಗೊಂದಲ ಇತ್ತು.ಈಗಲೂ ಕೂಡ ಬಹಳ ವಿರೋಧ ಇದೆ.ಸಮೀಕ್ಷೆ ಆಗಿಲ್ಲ ಅನ್ನೋ ಆರೋಪ ಇದೆ.ನಮ್ಮನ್ನ ಬಂದು ಸಮೀಕ್ಷೆ ಆಗಿಲ್ಲ ಅಂತ ಆರೋಪ ಮಾಡಿದ್ರು.ಈಗ ಕೊಟ್ಟಿರೋ ವರದಿ ಚೌ.. ಚೌ ವರದಿ.ದತ್ತಾಂಶ ಕಾಂತರಾಜು ಅವರದ್ದು,‌ವರದಿ ನಂದು ಅಂತ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಆದೇಶ ಇರೋದು ಜಯಪ್ರಕಾಶ್ ಹೆಗ್ಡೆದು.ವರದಿ ಸ್ವೀಕಾರ ಕೇವಲ ರಾಜಕೀಯದ್ದು ಮಾತ್ರ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ-ಹೇಮಮಾಲಿನಿ