ತಡೆಗೋಡೆ ಮೇಲೇರಿ ನಿಂತ ಟ್ರಕ್: ಆಗುಂಬೆ ಘಾಟ್ ನಲ್ಲಿ ತಪ್ಪಿದ ದುರಂತ

Webdunia
ಗುರುವಾರ, 5 ಆಗಸ್ಟ್ 2021 (20:14 IST)
ಆಗುಂಬೆ ಘಾಟ್ ನ 6 ಮತ್ತು 7 ನೇ ತಿರುವಿನ ಮಧ್ಯದಲ್ಲಿ ಪ್ರಪಾತದತ್ತ ಮುಖ ಮಾಡಿದ ಟ್ರಕ್ ರಸ್ತೆ ಬದಿಯಲ್ಲಿ ಅಡ್ಡಲಾಗಿ ನಿರ್ಮಿಸಲಾಗಿರುವ ಉಕ್ಕಿನ ತಡೆಗೋಡೆ ಮೇಲೆ ಹತ್ತಿ ನಿಂತಿದೆ.
ಶಿವಮೊಗ್ಗ ಕಡೆಯಿಂದ ಭತ್ತವನ್ನು ತುಂಬಿಕೊಂಡು ಮಂಗಳೂರಿನತ್ತ ತೆರಳುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿದ್ದರಿಂದ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳು. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಕ್ಕಿನ ತಡೆಗೋಡೆ ಇದ್ದಿದ್ದರಿಂದಾಗಿ ಟ್ರಕ್ ಪ್ರಪಾತಕ್ಕೆ ಬೀಳುವುದು ತಪ್ಪಿದೆ. ಅರ್ಧ ಟ್ರಕ್ ಹೆದ್ದಾರಿ ಕಡೆ ಇದ್ದರೆ ಇನ್ನರ್ಧ ಟ್ರಕ್ ಪ್ರಪಾತದ ಕಡೆ ನೇತಾಡುತ್ತಿದೆ, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ ತಪ್ಪಿದೆ.
ಒಂದು ವೇಳೆ ಟ್ರಕ್ ಪ್ರಪಾತಕ್ಕೆ ಬಿದ್ದಿದ್ದೇ ಆದಲ್ಲಿ ಆಗುಂಬೆ ಘಾಟ್ ನ ಏಳನೇ ತಿರುವಿನಲ್ಲಿ ಬರುತ್ತಿರುವ ವಾಹನಗಳ ಮೇಲೆಯೇ ಬೀಳುತ್ತದೆ. ಇದರಲ್ಲಿ ಸಾವು ನೋವು ವರದಿಯಾಗುವ ಸಂಭವ ಇತ್ತು. ಉಕ್ಕಿನ ತಡೆಗೋಡೆ ಇದ್ದಿದ್ದರಿಂದಾಗಿ ಭಾರೀ ಅವಘಡ ತಪ್ಪಿದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನಗೆ ಅದ್ಧೂರಿ ಬದುಕ ಬೇಡ, ಕನಿಷ್ಠ ಭದ್ರತೆ ಸಾಕೆಂದ ಕೇರಳದ ನೂತನ ಸಿಎಂ ಸತೀಶನ್

ಪ್ರಧಾನಿ ಮೋದಿ ಏನೇ ಮಾಡಿದ್ರೂ ಅಂಧ ಭಕ್ತರು ಸಂತೋಷ ಪಡ್ತಾರೆ: ಸಚಿವ ಸುಧಾಕರ್

ವಾಡಿಕೆಗಿಂತ ಆರು ದಿನ ಮುಂಚಿತವಾಗಿ ಮಾನ್ಸೂನ್ ಕೇರಳಕ್ಕೆ, ಇಲ್ಲಿದೆ ಮಾಹಿತಿ

ಶಿವಮೊಗ್ಗದಲ್ಲಿ ಒಂದೇ ಮೈದಾನದಲ್ಲಿ 5ಸಾವಿರ ಕ್ರಿಕೆಟ್ ಪಂದ್ಯ ವೀಕ್ಷಿಸಬಹುದು

ವಿಜಯ್‌ಗೆ ಕರೆ ಮಾಡಿ ನಿಮ್ಮ ಜತೆ ನಾವಿದ್ದೇವೆಂದ ಡಿಕೆ ಶಿವಕುಮಾರ್‌, Video

ಮುಂದಿನ ಸುದ್ದಿ
Show comments