ಆಧಾರ್ ನೊಂದಣಿಗೆ ಈಗಲೂ ತಪ್ಪದ ಪರದಾಟ!

Webdunia
ಬುಧವಾರ, 1 ಆಗಸ್ಟ್ 2018 (14:04 IST)
ಆಧಾರ್ ನೊಂದಣಿಗಾಗಿ ಜನರ ಪರದಾಟ ಈಗಲೂ ತಪ್ಪುತ್ತಿಲ್ಲ. ಪ್ರತಿದಿನ ಕ್ಯೂ ನಲ್ಲಿ ಕಾದು ಕಾದು ಸುಸ್ತಾಗುತ್ತಿದ್ದಾರೆ ಹಳ್ಳಿ ಮಂದಿ. ತುಮಕೂರು‌ ಜಿಲ್ಲೆ ಕುಣಿಗಲ್ ನ ಆಧಾರ್ ನೊಂದಣಿ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.

ಆಧಾರ್ ನಲ್ಲಿ ಲೋಪಗಳಿಂದ ಪಡಿತರ ಇಲ್ಲದೆ ಜನರು ಪರದಾಡುತ್ತಿರುವ  ಚಿತ್ರಣ ಸಾಮಾನ್ಯವಾಗಿದೆ. ಆಧಾರ್ ತಿದ್ದುಪಡಿ ಮಾಡಿಸಲು ನಿತ್ಯ ಪರದಾಟ ಕೆಲಸವಾದಂತೆ ಆಗಿಬಿಟ್ಟಿದೆ. ದಿನಕ್ಕೆ 15-20 ಜನಕ್ಕೆ ಮಾತ್ರ ನೊಂದಣಿ ತಿದ್ದುಪಡಿ ಮಾಡುತ್ತಿರುವ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ದೂರದ ಹಳ್ಳಿಗಳಿಂದ ಬರುತ್ತಿರುವ ಜನರು ಹಳ್ಳಿಗರು ತೊಂದರೆ ಎದುರಿಸುತ್ತಿದ್ದಾರೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕ್ಯೂನಲ್ಲಿ ನಿಂತು ಕಾದು ಕಾದು ವಾಪಾಸ್ಸಾಗುತ್ತಿದ್ದಾರೆ.

ಹಳ್ಳಿಗಳಿಂದ ಕೆಲಸ ಕಾರ್ಯ ಬಿಟ್ಟು ಪ್ರತಿದಿನ ಆಧಾರ್ ನೊಂದಣಿಗೆ ತಿರುಗುವ ಪರಿಸ್ಥಿತಿ ಎದುರಾಗುತ್ತಿರುವುದರಿಂದ ಆಧಾರ್ ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿದೆ. ಹೀಗಾಗಿ ಜನರಿಂದ ಆಧಾರ್ ಸಿಬ್ಬಂದಿಗಳು ಸಹ ತರಾಟೆಗೆ ಒಳಗಾಗುತಿದ್ದಾರೆ. 
ಟೋಕನ್ ಕೊಟ್ಟು ವ್ಯವಸ್ಥಿತವಾಗಿ ನೊಂದಣಿ, ತಿದ್ದುಪಡಿ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಿತ್ ಶಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮಮತಾ ಬ್ಯಾನರ್ಜಿ

ಮಧ್ಯಪ್ರಾಚ್ಯ ಸಂಘರ್ಷ: ಯಾವುದೇ ಇಂಧನ ಕೊರತೆಯಿಲ್ಲ

ಸುಧಾಕರ್ ಆರೋಗ್ಯದ ಬಗ್ಗೆ ಬಿಗ್‌ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ

ಮದುವೆ ನೆಪದಲ್ಲಿ ಯುವತಿಗೆ ದೋಖಾ: ಮಗು, ಸಂತ್ರಸ್ತೆ ಪಾಲನೆಗೆ ಕೃಷ್ಣ ಜೆ ರಾವ್‌ ಎಷ್ಟು ಹಣ ನೀಡಬೇಕು ಗೊತ್ತಾ

ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕನ ಶವ ಬಾವಿಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ

ಮುಂದಿನ ಸುದ್ದಿ
Show comments