ಜೈಲಿನಿಂದ ಬೆದರಿಕೆ ಕರೆ; ಇಬ್ಬರ ಬಂಧನ

Webdunia
ಶುಕ್ರವಾರ, 2 ಡಿಸೆಂಬರ್ 2022 (20:12 IST)
VHP ಮುಖಂಡನಿಗೆ ಜೈಲಿನಿಂದಲೇ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದಿದ್ದು, ಬೆದರಿಕೆ ಹಾಕಿದವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಟಿಪ್ಪು ನಗರದ ಅಲ್ತಾಫ್ ಅಲಿಯಾಸ್ ಕಟ್ಟಪ್ಪ ಎಂಬಾತನನ್ನು ಬಂಧಿಸಲಾಗಿದೆ. ನವೆಂಬರ್​​​​ 25 ರಂದು ಬೆಳಿಗ್ಗೆ 11 ಗಂಟೆಯಿಂದ 26 ರ ಸಂಜೆ 7 ಗಂಟೆಯವರಿಗೆ ಜಿತೇಂದ್ರ ಎಂಬುವವರಿಗೆ ವಾಟ್ಸಾಪ್​ ಕರೆ ಬಂದಿದೆ. ಹಣ ನೀಡು ಇಲ್ಲದಿದ್ದರೆ ನಿನ್ನನ್ನು ಹತ್ಯೆ ಮಾಡಲಾಗುವುದು ಎಂದು ಹೆದರಿಸಲಾಗಿತ್ತಂತೆ. ಗುಲ್ಬರ್ಗ ಮತ್ತು ಬೆಳಗಾವಿ ಹಿಂಡಲಗಾ ಜೈಲಿನಿಂದ  ಕರೆ ಬಂದಿದ್ದು, ಭದ್ರಾವತಿ ನಾಗ ಎಂಬಾತ ಮೊದಲು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನಂತರ 25 ಸಾವಿರ ರೂಪಾಯಿಗೆ ಒಪ್ಪಿಕೊಂಡಿದ್ದಾನೆ. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ನೀಡುವಂತೆ ಒತ್ತಾಯ ಮಾಡಲಾಗಿದ್ದು, ಆಗ ಜಿತೇಂದ್ರ ಖುದ್ದು ಹಣ ನೀಡುವುದಾಗಿ ಹೇಳಿದ್ದಾನೆ. ನಿಮ್ಮವರನ್ನು ಕಳಿಸಿ, ಗೋಪಾಳದ ಕೆನರಾ ಬ್ಯಾಂಕ್ ಬಳಿ ಇರುತ್ತೇನೆ ಎಂದು ಜಿತೇಂದ್ರ ಹೇಳಿದ್ದಾನೆ. ಅದರಂತೆ ಕರೆ ಮಾಡಿದ್ದ ವ್ಯಕ್ತಿ ಆತನ ಸಹಚರ ಅಲ್ತಾಫ್​​​ನನ್ನು ಕಳುಹಿಸಿದ್ದ. ಆಗ ತುಂಗಾನಗರ ಠಾಣೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಜೈಲಿನಿಂದ ಕರೆ ಮಾಡಿದ್ದು ಯಾರು, ಬಂಧನವಾದ ವ್ಯಕ್ತಿಗಳು ಯಾರು ಎಂದು ತನಿಖೆಯಿಂದ ತಿಳಿದು ಬರಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈನ ವಿಶಾಖಾ ತಿಲ್ಕರ್ ಆತ್ಮಹತ್ಯೆ: ಎಲ್ಲೆಲ್ಲೂ ಸಿಸಿಟಿವಿ, ಮಾತಾಡೋ ಹಾಗಿಲ್ಲ, ಗಂಡನ ಕಿರುಕುಳದ ಇಂಚಿಂಚೂ ಬಯಲು

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಧಾರ್ಮಿಕ ತಾಣದಲ್ಲಿ ಯುವಕ, ಯುವತಿ ಅಸಭ್ಯ ವರ್ತನೆ: ಕ್ಯಾಮರಾ ನೋಡುತ್ತಿದ್ದಂತೇ ಎಸ್ಕೇಪ್ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಆರ್ ಎಸ್ಎಸ್ ಬ್ಯಾನ್ ಮಾಡಲು ಪ್ರಿಯಾಂಕ್ ಖರ್ಗೆಗೆ ಸಾಧ್ಯವೇ, ಕಾನೂನಿನ ಬಗ್ಗೆ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಿವರಣೆ

ಮುಂದಿನ ಸುದ್ದಿ
Show comments