Select Your Language

Notifications

webdunia
webdunia
webdunia
webdunia

ಅಗಲಿದ ನಾಯಕರಿಗೆ ಅಧಿವೇಶನದಲ್ಲಿ ಅಶ್ರುತರ್ಪಣ

cm sidaramayya

geetha

bangalore , ಸೋಮವಾರ, 26 ಫೆಬ್ರವರಿ 2024 (19:21 IST)
ಬೆಂಗಳೂರು :ಹಿರಿಯ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಸದನದಲ್ಲಿ ಶೃದ್ಧಾಂಜಲಿ ಸಲ್ಲಿಸಲಾಯಿತು. ಡಿಸಿಎಂ ಡಿ.ಕೆ. ಶಿವಕುಮಾರ್‌ , ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ , ಸಚಿವ ಜಮೀರ್‌ ಅಹ್ಮದ್‌, ಸಚಿವ ಪ್ರಿಯಾಂಕ್‌ ಖರ್ಗೆ,ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ರಾಜಾ ವೆಂಕಟಪ್ಪ ನಾಯಕರ ಅಗಲಿಕೆಗೆ ವಿಷಾದ ವ್ಯಕ್ತಪಡಿಸಿದರು. 
 
ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮ್ಮ ಸದನದ ಸದಸ್ಯರಾದ ರಾಜಾ ವೆಂಕಟಪ್ಪ ನಾಯಕರನ್ನು ಕಳೆದುಕೊಂಡಿರುವುದು ನಮ್ಮ ಕುಟುಂಬದ ಸದಸ್ಯರೊಬ್ಬರನ್ನು ಕಳೆದಕೊಂಡಂತಾಗಿದೆ. ಅವರು ಗಳಿಸಿದ್ದ ಜನಪ್ರೀತಿ, ಅವರ ಸರಳತೆ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, ಅವರು ರಾಜ ಮನೆತನದವರಾಗಿದ್ದರೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಮನೆತನದ ಹಿನ್ನೆಲೆ ಹೊಂದಿದ್ದರು. ಅವರ ಸಾವಿನಿಂದ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಜಾತಶತ್ರುವೆಂದೇ ಅವರು ಹೆಸರಾಗಿದ್ದರು ಎಂದು ವಿಷಾದಿಸಿದರು. ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡಿ, ರಾಜಾ ವೆಂಕಟಪ್ಪ ನಾಯಕರ ಅವರ ಅಗಲಿಕೆಯನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಶಾಸಕ ವಿ. ಸೋಮಣ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರಸ್ಪರ ಭೇಟಿ