Select Your Language

Notifications

webdunia
webdunia
webdunia
webdunia

ಶಾಸಕಿ ಜೊತೆ ಮಾತಿನ ಚಕಮಕಿ

ಶಾಸಕಿ ಜೊತೆ ಮಾತಿನ ಚಕಮಕಿ
ಉತ್ತರ ಕನ್ನಡ ಜಿಲ್ಲೆ , ಶನಿವಾರ, 4 ಮಾರ್ಚ್ 2023 (17:03 IST)
ಮಾಜಾಳಿ ಪಂಚಾಯತಿ ಪಿಡಿಓ ಬದಲಾವಣೆ ವಿರೋಧಿಸಿ, ಮನವಿ ಸಲ್ಲಿಸಲು ಬಂದಾಗ ದರ್ಪ ತೋರಿಸಿ ಹಲ್ಲೆಗೆ ಯತ್ನಿಸಿದ್ದರು ಎಂದು ಶಾಸಕಿ ರೂಪಾಲಿ ನಾಯ್ಕ್ ವಿರುದ್ಧ ಕಾಂಗ್ರೆಸ್​ ಮಾಜಿ ಶಾಸಕ ಸತೀಶ್ ಸೈಲ್ ಆರೋಪ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಈ ಘಟನೆ ನಡೆದಿದೆ. ಸತೀಶ್ ಸೈಲ್ ಹಾಗೂ ರೂಪಾಲಿ ನಾಯ್ಕ್ ನಡುವೆ ಮಾತಿನ ಚಕಮಕಿ ನಡೆದಿದ್ದು, ರಾಜಕಾರಣಿಗಳ ನಡುವಿನ ಗಲಾಟೆ ತಾರಕಕ್ಕೇರಿದೆ. ನಂತರ ಶಾಸಕ ಕುಡುಕ ಎಂದು ಶಾಸಕಿ ರೂಪಾಲಿ ನಿಂದಿಸಿದ್ದಾರೆ, ಶಾಸಕಿ ರೂಪಾಲಿ ನಾಯ್ಕ ಆರೋಪದ ಬಳಿಕ ಸತೀಶ ಸೈಲ್ ಸ್ವಯಂ ತಪಾಸಣೆ ಮಾಡಿಸಿಕೊಂಡಿದ್ದಾರೆ, ತಪಾಸಣೆ ಬಳಿಕ ಕ್ರಿಮ್ಸ್ ಆಸ್ಪತ್ರೆಯ ವೈದ್ಯರು ಸತೀಶ ಮದ್ಯಸೇವನೆ ಮಾಡಿಲ್ಲ ಎಂದು ವರದಿ ನೀಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿ ತೋಟ ನಾಶ ಮಾಡಿದ ದುರುಳರು