Select Your Language

Notifications

webdunia
webdunia
webdunia
webdunia

ಡಾ.ಮಂಜುನಾಥ ವಿರುದ್ಧ ಅದೇ ಹೆಸರಿನ ವ್ಯಕ್ತಿ ಕಣಕ್ಕೆ: ಬಿಜೆಪಿ-ಜೆಡಿಎಸ್‌ಗೆ ತಲೆನೋವಾಗಿರುವ ಆ ವ್ಯಕ್ತಿ ಯಾರು!

ಡಾ.ಮಂಜುನಾಥ ವಿರುದ್ಧ ಅದೇ ಹೆಸರಿನ ವ್ಯಕ್ತಿ ಕಣಕ್ಕೆ: ಬಿಜೆಪಿ-ಜೆಡಿಎಸ್‌ಗೆ ತಲೆನೋವಾಗಿರುವ ಆ ವ್ಯಕ್ತಿ ಯಾರು!

Sampriya

ಬೆಂಗಳೂರು , ಶುಕ್ರವಾರ, 29 ಮಾರ್ಚ್ 2024 (15:34 IST)
Photo Courtesy X
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಪಕ್ಷಗಳು ತನ್ನ ಗೆಲುವಿಗಾಗಿ ಸಕತ್ ಪ್ಲಾನ್ ಮಾಡಿಕೊಳ್ಳುತ್ತಿದ್ದೆ.

ಸದ್ಯ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕೂಡ ಒಂದಾಗಿದೆ. ಇಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಹೃದ್ರೋಗ ತಜ್ಞ ಡಾ.ಮಂಜುಣಾಥ್ ಅವರು ಕಣಕ್ಕಿಳಿದಿದ್ದು, ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಡಿ.ಸುರೇಶ್ ಅವರು ಕಣದಲ್ಲಿದ್ದಾರೆ.

ಇದೀಗ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಲು ಸಲುವಾಗಿ  ಡಾ. ಸಿ.ಎನ್. ಮಂಜುನಾಥ್​ ವಿರುದ್ಧ ಅದೇ ಹೆಸರಿನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯಿಂದ ಡಾ. ಸಿ.ಎನ್‌. ಮಂಜುನಾಥ್ ಅವರು ಸ್ಪರ್ಧಿಸಿದ್ದಾರೆ. ಇದೀಗ ಅದೇ ಹೆಸರಿನ ಮತ್ತೊಬ್ಬರು ಸ್ಪರ್ಧಿಸಲು ಸಿದ್ಧತೆ ನಡೆಸಿ, ಅವರ ಸೋಲಿಗೆ ಹೊಸ ತಂತ್ರವನ್ನು ಮಾಡಲಾಗಿದೆ.

ಇನ್ನೂ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್. ಅವರಿಗೆ ಸ್ಪರ್ಧೆ ನೀಡಲು ಕಣಕ್ಕಿಳಿಯುತ್ತಿರುವ ವ್ಯಕ್ತಿ ಚನ್ನರಾಯಪಟ್ಟಣದವರು ಎಂದು ತಿಳಿದುಬಂದಿದೆ.

ಇವರು ಬಹುಜನ ಭಾರತ್ ಪಾರ್ಟಿಯಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಜೊತೆ ನಮ್ಮ ದೋಸ್ತಿ ಶಾಶ್ವತ ಎಂದ ಕುಮಾರಸ್ವಾಮಿ