Select Your Language

Notifications

webdunia
webdunia
webdunia
webdunia

ಸುಳ್ಳು ಹೇಳುವವರೊಂದಿಗೆ ಕಣ್ಣೀರು ಹಾಕುವವರು ಜತೆಯಾಗಿದ್ದಾರೆ: ಮೈತ್ರಿ ನಾಯಕರಿಗೆ ಡಿ.ಕೆ.ಸುರೇಶ್ ಟಾಂಗ್

D K Suresh

Sampriya

ರಾಮನಗರ , ಗುರುವಾರ, 28 ಮಾರ್ಚ್ 2024 (19:43 IST)
Photo Courtesy X
ರಾಮನಗರ: ನನ್ನ ಸೋಲಿಸಲು ನಿರ್ದೇಶಕರು, ನಿರ್ಮಾಪಕರು, ನಟರು ಒಟ್ಟು ಸೇರಿದ್ದಾರೆ. ಸಿನಿಮಾದಲ್ಲಿ ರೀಲ್ ಬಿಟ್ಟ ಹಾಗೇ, ನಿಜ ಜೀವನದಲ್ಲಿ ಆಗಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.

ನನ್ನ ಸೋಲಿಗೆ ಎಲ್ಲರೂ ಒಟ್ಟಾಗಿದ್ದಾರೆ. ಯಾಕೆ ನನ್ನನ್ನು ಸೋಲಿಸುತ್ತೀರಾ, ಬಡವರ ಪರವಾಗಿ, ರೈತರ ಪರವಾಗಿ, ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದಕ್ಕಾ? ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಸೋಲಿಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.

ಸುಳ್ಳು ಹೇಳುವವರ ಜತೆ ಕಣ್ಣೀರು ಹಾಕುವವರು ಜತೆಗೂಡಿದ್ದಾರೆ: ನಾವು ಮುಂದಿನ 4 ವರ್ಷಗಳ ಕಾಲ ಜನರ ಮಧ್ಯೆ ಇದ್ದು, ಅವರ ಕಷ್ಟಗಳಿಗೆ ಜತೆಯಾಗುತ್ತೇವೆ. ಇನ್ನೂ ಮುಂದಿನ ದಿನಗಳಲ್ಲಿ ಸುಳ್ಳಿನ ಗ್ಯಾರಂಟಿಗಳನ್ನು ಹೊತ್ತುಕೊಂಡು ಬಿಜೆಪಿಯವರು ಮತ ಕೇಳಲು ಬರುತ್ತಿದ್ದಾರೆ. ಸುಳ್ಳು ಹೇಳುವವರ ಜೊತೆ ಕಣ್ಣೀರು ಹಾಕುವವರು ಸೇರಿಕೊಂಡಿದ್ದಾರೆ ಎಂದು ಜೆಡಿಎಸ್‌ -ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಸೇನಾಗೆ ಸೇರಿದ ನಟ ಗೋವಿಂದ: 14 ವರ್ಷದ ನಂತರ ಮತ್ತೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್‌ ನಟ