Publish Date: Wed, 16 Jan 2019 (10:52 IST)
Updated Date: Wed, 16 Jan 2019 (11:01 IST)
ಬೆಂಗಳೂರು : ಅಪರೇಷನ್ ಕಮಲಕ್ಕೆ ಸಿಲುಕಿ ಶಾಸಕರು ಪಕ್ಷ ತೊರೆಯಬಾರದು ಎಂದು ಅಪರೇಷನ್ ಕಮಲಕ್ಕೆ ಕಡಿವಾಣ ಹಾಕಲು ಜೆಡಿಎಸ್ ಹೊಸ ಪ್ಲಾನ್ ಮಾಡಿದೆ.
ಆ ಮೂಲಕ ಅಪರೇಷನ್ ಕಮಲಕ್ಕೆ ಸಿಲುಕಿ ಪಕ್ಷ ಬಿಟ್ಟವರ ಅಭಿಪ್ರಾಯವನ್ನು ಹೇಳಿಸುವುದರ ನೀಡುವುದರ ಮೂಲಕ ಶಾಸಕರನ್ನು ರಕ್ಷಿಸಿಕೊಳ್ಳಲು ಜೆಡಿಎಸ್ ಹೊಸ ತಂತ್ರ ರೂಪಿಸಿದೆ. ಯಾರು ಕ್ಷಣಿಕ ಸುಖಕ್ಕೆ ಆಪರೇಷನ್ ಕಮಲಕ್ಕೆ ಸಿಲುಕಬೇಡಿ ಎಂದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮೂಲಕ ಮನವಿ ಮಾಡಿಸಿದ್ದಾರೆ.
ಮಾಜಿ ಸಚಿವ ಆನಂದ್ ಆಸ್ನೋಟಿಕರ್ 2008ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು, ನಂತರ ಪಕ್ಷ ಸೇರಿದ ಬಳಿಕ ಅಲ್ಲಿನ ಅನುಭವ ಹೇಳಿ ಇದೀಗ ಶಾಸಕರನ್ನು ಅಪರೇಷನ್ ಕಮಲಕ್ಕೆ ಸಿಲುಕದಂತೆ ತಡೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.