Webdunia - Bharat's app for daily news and videos

Install App

ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆ ಪರಿಹರಿಸಲು ಹೊಸ ಅಸ್ತ್ರಂ ತಂತ್ರಜ್ಞಾನ

geetha
ಶನಿವಾರ, 13 ಜನವರಿ 2024 (17:00 IST)
ಬೆಂಗಳೂರು  :ವಾಹನ ದಟ್ಟಣೆಯ ಬಗ್ಗೆ ನಿಖರವಾದ ಮಾಹಿತಿ ನೈಜ ಸಮಯದಲ್ಲಿ ದೊರೆಯಲಿದ್ದು, ಜೊತೆಗೆ ಅಪಘಾತ, ಮೆರವಣಿಗೆ ಅಥವಾ ಸಮಾರಂಭಗಳಿಂದ ಉಂಟಾಗಿರುವ ವಾಹನ ದಟ್ಟಣೆಯ ಬಗ್ಗೆಯೂ ಮಾಹಿತಿ ದೊರೆಯಲಿದೆ. ಯಾವ ಸಮಯದಲ್ಲಿ ಯಾವ ಪ್ರದೇಶದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಉಂಟಾಗುತ್ತಿದೆ ಎಂಬ ಬಗ್ಗೆ ಆಯಾ ಸಂಚಾರ ಪೊಲೀಸ್‌ ಠಾಣೆಯ ಅಧಿಕಾರಿಗೆ ಪ್ರತಿ 15 ನಿಮಿಷಕ್ಕೊಮ್ಮೆ ಮೊಬೈಲ್‌ ಗೆ ಸಂದೇಶ ಬರಲಿದೆ. ಜೊತೆಗೆ,  ವಾಹನ ದಟ್ಟಣೆಯ ತೀವ್ರತೆ, ವಾಹನಗಳ ಸಂಖ್ಯೆಯ ಬಗ್ಗೆಯೂ ಮಾಹಿತಿ ದೊರಕಲಿದೆ. 

ಆಂಬುಲೆನ್ಸ್‌ ಗಳ ಸುಗಮ ಸಂಚಾರಕ್ಕೂ ಸಹ ಅಸ್ತ್ರಂ ತಂತ್ರಜ್ಞಾನ ಸಹಾಯ ಮಾಡಲಿದ್ದು, ಒಂದು ವೇಳೆ ಆಂಬುಲೆನ್ಸ್‌ ಯಾವುದಾದರೂ ಟ್ರಾಫಿಕ್‌ ನಲ್ಲಿ 2 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿಕೊಂಡಲ್ಲಿ ಆಪ್‌ ಮೂಲಕ ಎಸ್‌ಒಎಸ್‌ ಬಟನ್‌ ಆಕ್ಟಿವೇಟ್‌ ಆಗಲಿದೆ. ಇದರಿಂದ ಆ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗಲಿದೆ. ಸಂಚಾರ ನಿರ್ವಹಣೆಗಾಗಿ 10 ಡ್ರೋಣ್‌ ಕೆಮೆರಾಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಬೆಳಗ್ಗೆ ಹಾಗೂ ಸಂಜೆ ಪೀಕ್‌ ಅವರ್‌ ಸಮಯದಲ್ಲಿ ಸಂಚಾರದ ದಟ್ಟಣೆಯನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. 

ರಾಜಧಾನಿ ನಗರವಾದ ಬೆಂಗಳೂರಿನ ಪ್ರಮುಖ ಸಮಸ್ಯೆಯಾದ ವಾಹನ ದಟ್ಟಣೆಯನ್ನು  ಪರಿಹರಿಸಲು ಬೆಂಗಳೂರು ಸಂಚಾರಿ ಪೊಲೀಸರು ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ.  ಅಸ್ತ್ರಂ ಎಂಬ ತಂತ್ರಜ್ಞಾನವನ್ನು ಅವಿಷ್ಕರಿಸಲಾಗಿದ್ದು, ಇದರಿಂದ ಸುಗಮ ವಾಹನ ಸಂಚಾರ ಉಂಟಾಗಲಿದೆ ಎಂದು ಸಂಚಾರ ಪೊಲೀಸ್‌ ಇಲಾಖೆ ಹೇಳಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments