ಭೂಗತ ಲೋಕದ ರೌಡಿಗಳಿಂದ ನಾವೆಲ್ಲ ಒಂದೇ ಎಂಬ ಸಂದೇಶ

Webdunia
ಗುರುವಾರ, 26 ಜನವರಿ 2023 (15:17 IST)
ಬೆಂಗಳೂರು ರೌಡಿಪಾಳಯದಲ್ಲಿ ಪಾರುಪತ್ಯ ಸಾಧಿಸಿರೋ ರೌಡಿಗಳು ಅಂದ್ರೆ ಅದು ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನ. ಸಿಟಿಯಲ್ಲಿ ಸುನೀಲ ಮತ್ತು ನಾಗ ಬದ್ದ ವೈರಿಗಳು ಒಬ್ಬರನ್ನೊಬ್ಬರು ಮುಗಿಸಲು ಹಪಹಪಿಸುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಇದೇ ಅನುಮಾನದ ಮೇರೆಗೆ ಸೈಲೆಂಟ್ ಸುನೀಲ, ನಾಗ ಹಾಗೂ ಮೋಹನನ್ನು ಸಿಸಿಬಿ ವಿಚಾರಣೆ ಕೂಡ ನಡೆಸಿತ್ತು. ಇದೇ ವಿಚಾರ ಎರಡೂ ಗ್ಯಾಂಗ್ ಹುಡುಗರ ನಡುವೆ ದ್ವೇಷಕ್ಕೂ ಕಾರಣವಾಗಿತ್ತು.  ಹಿಂದೆ ಕೂಡ ಸುನೀಲ‌ನ ಮೇಲೆ ನಾಗ ಅಟ್ಯಾಕ್ ಮಾಡಿಸಿದ್ದ, ನಾಗನ ಹತ್ಯೆಗೆ ಸುನೀಲ ಸ್ಕೆಚ್ ಹಾಕಿಸಿದ್ದ, ಬೆಂಗಳೂರು ಭೂಗತಲೋಕದ ಪಟ್ಟಕ್ಕೆರಲು ಇಬ್ಬರು ಪೈಪೋಟಿ ನಡೆಸ್ತಿದ್ದರೆ ಅನ್ನೋ ವಿಚಾರಕ್ಕೆ ಸದ್ಯ ಇಬ್ಬರು ರೌಡಿಗಳು ಫುಲ್ ಸ್ಟಾಪ್ ಇಟ್ಟಂಗೆ ಕಾಣ್ತಿದೆ. ಒಂದೇ ಫೋಟೋದಲ್ಲಿ ಸುನೀಲ,‌ನಾಗ ಮತ್ತು ಮೋಹನ ಫೋಜ್ ಕೊಟ್ಟು ನಾವೇಲ್ಲ ಒಂದೇ ನಮ್ಮಲ್ಲಿ ಯಾವೂದೇ ದುಶ್ಮಿನಿ ಇಲ್ಲ ಅನ್ನೋ ಮೆಸೇಜ್ ಪಾಸ್ ಮಾಡಿದ್ದಾರೆ. ಇತ್ತು ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದ್ದು ಎರಡೂ ಟೀಂ ಹುಡುಗರು ಕೂಡ ಫೋಟೋ ಶೇರ್ ಮಾಡ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಸಂಬಂಧ ಆರೋಪ: ಚಾಕುವಿನಿಂದ ಇರಿದು ವ್ಯಕ್ತಿಯ ಮರ್ಡರ್

ಸಿಎಂ ಆಗುವ ಆಸೆಯನ್ನು ಪೂರೈಸಿಕೊಂಡಿರುವ ಡಿಕೆಶಿಗೆ ಸವಾಲುಗಳು ಹಲವು

ಗೋವಿಂದಪುರ 6ಜನರ ಹತ್ಯೆ ಪ್ರಕರಣ: ತನಿಯಲ್ಲಿ ಮಹತ್ವದ ಬೆಳವಣಿಗೆ

ಬಿರಿಯಾನಿ ಹಾಗೇ ಹುಲ್ಲು ಸೇವಿಸಿದ ಯುವಕ, ಇವನ ಆರೋಗ್ಯದ ಕತೆಯೇನು, Video

ಮುಂದಿನ ಸುದ್ದಿ
Show comments