Publish Date: Wed, 05 Dec 2018 (06:41 IST)
Updated Date: Wed, 05 Dec 2018 (06:52 IST)
ಬೆಂಗಳೂರು : ಮದುವೆಯಾಗುವ ನೆಪಯೊಡ್ಡಿ ವೈದ್ಯೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ಅಡುಗೋಡಿಯಲ್ಲಿ ನಡೆದಿದೆ.
ರಾಮಮೂರ್ತಿ ಎಂಬಾತ ಈ ಕೃತ್ಯ ಎಸಗಿದ ಕಾಮುಕನಾಗಿದ್ದು. ಈತ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿ ಎಂದು ಸುಳ್ಳು ಹೇಳಿ ಮ್ಯಾಟ್ರಿಮೋನಿಯಲ್ಲಿ ವೈದ್ಯೆಯೊಬ್ಬಳನ್ನು ಪರಿಚಯ ಮಾಡಿಕೊಂಡು ನಂತರ ಮದುವೆಯಾಗುವುದಾಗಿ ಚರ್ಚಿಸಿದ್ದಲ್ಲದೇ ಕೆಲಸ ಕೊಡಿಸುವ ಆಸೆ ತೋರಿಸಿ ವೈದ್ಯೆ ಮತ್ತು ಸಂಬಂಧಿಕರಿಂದ 22 ಲಕ್ಷ ರೂ. ಪಡೆದಿದ್ದನು. ಅಷ್ಟೇ ಅಲ್ಲದೇ ಒತ್ತಾಯಪೂರ್ವಕವಾಗಿ ವೈದ್ಯೆಯ ಜೊತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದನು.
ಆದರೆ ನವೆಂಬರ್ 22 ರಂದು ಶೇಷಾದ್ರಿಪುರಂ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆಯಾಗಲು ದಿನಾಂಕ ನಿಗದಿಪಡಿಸಿದ್ದನ್ನು ತಿಳಿದ ರಾಮಮೂರ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆ ಸಂಬಂಧ ವೈದ್ಯೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
pavithra
Publish Date: Wed, 05 Dec 2018 (06:41 IST)
Updated Date: Wed, 05 Dec 2018 (06:52 IST)