Publish Date: Tue, 03 Apr 2018 (17:44 IST)
Updated Date: Tue, 03 Apr 2018 (17:46 IST)
ಸಮಾಜವನ್ನ ಹಾಳುಮಾಡಲು ಬಂದವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ದಿಂಗಾಲೇಶ್ವರ್ ಶ್ರೀ ಗುಡುಗಿದ್ದಾರೆ
ನಮ್ಮ ಸಮಾಜ ಉಳಿಯಬೇಕು ಅನ್ನೋದೇ ನಮ್ಮ ಹೋರಾಟ. ನಮ್ಮ ಸಮಾಜವನ್ನ ಹಾಳುಮಾಡಲು ಬಂದವರಿಗೆ ಬುದ್ದಿ ಕಲಿಸಲು ನಾವಿಲ್ಲಿ ಸಭೆಸೇರಿದ್ದೇವೆ ಎಂದು ರಾಜ್ಯ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ದಿಂಗಾಲೇಶ್ವರ ಶ್ರೀ. ಮುಂದೇನು ಮಾಡಬೇಕು ಎನ್ನುವ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನಿಸುತ್ತೇವೆ.
ಮೊಂಡುತನದಿಂದ ಸಿಎಂ ಈ ಕೆಲಸ ಮಾಡಿದ್ದಾರೆ, ಯಾರ್ಯಾರು ಏನೇನು ಮಾಡಿದ್ದಾರೋ, ಮಾಡಿದ್ದನ್ನೋ ಮಾರಯ್ಯಾ ಅನ್ನೋಹಾಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ದಿಂಗಾಲೇಶ್ವರ್ ಶ್ರೀ ಗುಡುಗಿದ್ದಾರೆ.