Select Your Language

Notifications

webdunia
webdunia
webdunia
webdunia

ಬಾಹುಬಲಿ ಪ್ರತಿಮೆಗೆ ಬಟ್ಟೆ ಹಾಕುವಂತೆ ಸಿಎಂಗೆ ಪತ್ರ ಬರೆದ ಪತ್ರಕರ್ತ

ಬಾಹುಬಲಿ ಪ್ರತಿಮೆಗೆ ಬಟ್ಟೆ ಹಾಕುವಂತೆ ಸಿಎಂಗೆ ಪತ್ರ ಬರೆದ ಪತ್ರಕರ್ತ
ಬೆಂಗಳೂರು , ಗುರುವಾರ, 11 ಜನವರಿ 2018 (07:09 IST)
ಬೆಂಗಳೂರು : ಬಾಹುಬಲಿ ಪ್ರತಿಮೆಗೆ ಬಟ್ಟೆ ಹಾಕುವಂತೆ ಪತ್ರಕರ್ತರೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಆಶ್ಚರ್ಯಕರ ಘಟನೆಯೊಂದು ನಡೆದಿದೆ.


ಪ್ರಭು ಎಂಬ ಪತ್ರಕರ್ತರೊಬ್ಬರು ಸಿಎಂ ಸಿದ್ದರಾಮಯ್ಯ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಪತ್ರ ಬರೆದು ಬಾಹುಬಲಿಗೆ ಬಟ್ಟೆ ಹಾಕುವಂತೆ ಮನವಿ ಮಾಡಿದ್ದಾರೆ. 9ನೇ ಶತಮಾನದಲ್ಲಿ ಜೈನ ಧರ್ಮಗುರು ಬಾಹುಬಲಿ ಅವರು ದಿಗಂಬರಾಗಿದ್ದು, ಇಲ್ಲಿಯವರೆಗೂ ಅವರನನ್ನು ಹಾಗೆ ಉಳಿಸಿಕೊಂಡಿರುವುದು ಒಂದು ವಿಪರ್ಯಾಸವೇ ಆಗಿದೆ. ಅಂದು ಅವರು ತೆಗೆದುಕೊಂಡ  ನಿರ್ಧಾರ ಸರಿಎನಿಸಿದರೂ, ಇಂದು ಮಾನವನ ಪ್ರಗತಿ ದಿನದಿಂದ ದಿನಕ್ಕೆ ಬದಲಾಗುತ್ತಿದ್ದರಿಂದ ಬಾಹುಬಲಿಯನ್ನು ದಿಗಂಬರರಾಗಿ ನೋಡೋದಕ್ಕೆ ಅಸಹ್ಯವೆನಿಸುತ್ತದೆ . ಆದ ಕಾರಣ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನಹರಿಸಿ ಬಾಹುಬಲಿಗೆ ಬಟ್ಟೆ ಹಾಕಲಿ. ಇಲ್ಲವಾದಲ್ಲಿ ಕನಿಷ್ಠ ಗೊಮ್ಮಟೇಶ್ವರನ ಮಾನ ಮುಚ್ಚಲು ಚಡ್ಡಿಯಾದರೂ ಹಾಕಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿಗೆ ಇನ್ನೂ 81 ಟಿಎಂಸಿ ನೀರು ಕರ್ನಾಟಕ ಬಿಡಬೇಕು- ಪಳನಿಸ್ವಾಮಿ