Select Your Language

Notifications

webdunia
webdunia
webdunia
webdunia

ಊಟದಲ್ಲಿ‌ ಸೈನೆಡ್ ಬೇರೆಸಿ ಹೆಂಡತಿಯನ್ನೇ ಕೊಂದ ಗಂಡ

crime news

geetha

ಚಿಕ್ಕಮಗಳೂರು , ಗುರುವಾರ, 7 ಮಾರ್ಚ್ 2024 (17:21 IST)
ಚಿಕ್ಕಮಗಳೂರು- ಚಿಕ್ಕಮಗಳೂತಿನಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ಗೃಹಿಣಿಯ ಸಾವಿಗೆ ಬಿಗ್ ಟ್ವೀಸ್ಟ್ ಸಿಕ್ಕಿದೆ.ಪತಿ 
ದರ್ಶನ್ ಪತ್ನಿ ಶ್ವೇತಾಗೆ ರಾಗಿಮುದ್ದೆಯಲ್ಲಿ ಸೈನೈಡ್ ಹಾಕಿ ಹತ್ಯೆ ಗೈದಿದ್ದಾನೆ ಎಂದು ಪೋಲೀಸರ ತನಿಖೆ ವೇಳೆ ಬಯಲಾಗಿದೆ.
ಶ್ವೇತಾ ಹತ್ಯೆ ಮಾಡಿದ್ದು ನಾನೇ ಎಂದು ದರ್ಶನ್ ತಪೊಪ್ಪಿಕೊಂಡಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಲಾಗಿದ್ದ ಹೆಂಡತಿಯನ್ನ ಕೊಲೆ ಮಾಡಿದ್ದನೆ.

ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ದರ್ಶನ್ ಕಥೆ ಕಟ್ಟಿದ ಎನ್ನಲಾಗುತ್ತಿದೆ.ಪತ್ನಿ ಸಾವನ್ನಪ್ಪಿದ ಬಳಿಕ ಕೈಗೆ ಸೈನೆಡ್ ಇಂಜೆಕ್ಷನ್ ಕೂಡ ಕೊಟ್ಟಿದ್ದಾನೆ.ನಂತರ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಬಿಂಬಿಸುವುದಕ್ಕೆ ಇತರ ಪ್ಲಾನ್ ಹಾಕಿದ್ದಾನೆ.
 
ಆದ್ರೆ ಆತನ್ನ ಪ್ಲಾನ್ ಉಲ್ಟಾ ಆಗಿದೆ.ಆತ ವಿಷದ ಇಂಜೆಕ್ಷನ್‌ ನೀಡಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೆ, ಸೈನೇಡ್‌ ಮೂಲಕ ಸಾಯಿಸಲಾಗಿದೆ ಅನ್ನೋದು  ಸಾಬೀತಾಗಿದೆ. ಪತಿ ದರ್ಶನ್‌ ಇನ್ನೊಬ್ಬಳು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದು ಪತ್ನಿ ಶ್ವೇತಾಗೆ ತಿಳಿದು ಜಗಳ ಮಾಡಿದ್ದಳು. ಸಂಬಂಧಿಸಿದ ಯುವತಿಗೆ ಕರೆ ಮಾಡಿ ಪತಿಯ ತಂಟೆಗೆ ಬರಬೇಡ ಎಂದು ವಾರ್ನಿಂಗ್‌ ಕೂಡಾ ನೀಡಿದ್ದಳು.

ಇದಾದ ಮೇಲೆ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಬರುತ್ತಾಳೆ ಅಂತ ದರ್ಶನ್‌ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ. ಅನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಅಂತ ಕಥೆ ಕಟ್ಟಿದ್ದ.ಇದೀಗ ಮಾಡಲಾಗುತ್ತಿದೆ.ದರ್ಶನ್ ವಿರುದ್ಧ ಅನೈತಿಕ ಸಂಬಂಧ ಹೊಂದಿದ್ದ  ಆರೋಪ ಕೇಳಿ ಬಂದಿದೆ ಇದಕ್ಕೆ ಪತ್ನಿ ಅಡ್ಡಿಯಾಗಿದ್ದಕ್ಕೆ ದರ್ಶನ್ ಕೊಲೆ ಮಾಡಿದ್ದಾನೆ ಎಂದು ಮಹಿಳೆ ಕುಟುಂಬಸ್ಥರ ಆರೋಪಿಸುತ್ತಿದ್ದಾರೆ.ಇದೀಗ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರ ಕಣ್ಣಿಗೆ ಕಾಣದ ಇದು ಅಗೋಚರ ಕಾಂಚಾಣ