Publish Date: Sun, 31 May 2020 (16:22 IST)
Updated Date: Sun, 31 May 2020 (16:23 IST)
ಮಿಡತೆಗಳ ಹಿಂಡಿನ ಮೇಲೆ ದಾಳಿ ನಡೆಸಲು ಅಧಿಕಾರಿಗಳು ಡ್ರೋಣ್ ಬಳಕೆ ಮಾಡಿ ಯಶ ಸಾಧಿಸಿದ್ದಾರೆ.
ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶಕ್ಕೆ ಕಾರಣವಾಗಿರುವ ಮಿಡತೆಗಳ ಹಿಂಡು ನಾಶ ಮಾಡಲು ಮಧ್ಯರಾತ್ರಿ ಡ್ರೋಣ್ ಬಳಕೆ ಮಾಡಿ ಕೀಟ ನಾಶಕ ಸಿಂಪರಣೆ ಮಾಡಲಾಗಿದೆ.
ಜೈಪುರ ವ್ಯಾಪ್ತಿಯ ವಿರಾಟ್ ನಗರದ ಹೊಲ ಗದ್ದೆಗಳಲ್ಲಿ ಕಾಣಿಸಿಕೊಂಡಿರುವ ಮಿಡತೆಗಳ ಸಂಹಾರಕ್ಕೆ ಡ್ರೋಣ್ ಸಹಾಯಕವಾಗಿದ್ದು, ಗುಡ್ಡು ಗಾಡು ಪ್ರದೇಶವಾಗಿದ್ದರಿಂದ ಡ್ರೋಣ್ ಬಳಸಲಾಗಿದೆ ಎಂದಿದ್ದಾರೆ ಕೃಷಿ ಇಲಾಖೆ ಅಧಿಕಾರಿಗಳು.
ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಕೀಟ ನಾಶಕ ಸಿಂಪರಣೆ ಮಾಡಿದ್ದು, ಮಿಡತೆಗಳ ಸಂಪೂರ್ಣ ನಾಶಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.