Select Your Language

Notifications

webdunia
webdunia
webdunia
webdunia

ಬೈಕ್ ನಿಂದ ಪುಟಿದು ನದಿಗೆ ಬಿದ್ದ ಬಾಲಕಿ; ರಕ್ಷಣೆಗೆ ನದಿಗೆ ಹಾರಿದ ತಂದೆ ಸಾವು

ಬೈಕ್ ನಿಂದ ಪುಟಿದು ನದಿಗೆ ಬಿದ್ದ ಬಾಲಕಿ; ರಕ್ಷಣೆಗೆ ನದಿಗೆ ಹಾರಿದ ತಂದೆ ಸಾವು
ಬಾಗಲಕೋಟೆ , ಬುಧವಾರ, 4 ಜುಲೈ 2018 (18:22 IST)
ಕೃಷ್ಣಾ ನದಿ ಸೇತುವೆ ಮೇಲೆ ಇಂದು ಮನಕಲುಕುವ ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್ ನಿಂದ ಪುಟಿದ ಮೂರು ವರ್ಷದ ಬಾಲಕಿ ನದಿಗೆ ಬಿದ್ದಿದ್ದಾಳೆ. ಮಗಳ ರಕ್ಷಣೆಗಾಗಿ ನದಿಗೆ ಹಾರಿದ ತಂದೆಯೂ ಪ್ರಾಣಬಿಟ್ಟಿದ್ದಾನೆ. 
 
ಬಾಗಲಕೋಟೆ ಜಿಲ್ಲೆಯ ಗಲಗಲಿ ಗ್ರಾಮದ ಸೇತುವೆ ಮೇಲೆ ಚಲಿಸುತ್ತಿದ್ದ ಬೈಕ್ ನಿಂದ ಪುಟಿದು ಮೂರು ವರ್ಷದ ಬಾಲಕಿ ನದಿಗೆ ಬಿದ್ದಿದ್ದಾಳೆ. ಆನಮ್(3) ಬಾಲಕಿಯನ್ನು ನದಿಗೆ ಹಾರಿದ ತಂದೆ ದಸ್ತಗೀರ್ ಗೌಂಡಿ (29) ಕೂಡ ನದಿಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಕೃಷ್ಣಾ ನದಿ ಸೇತುವೆ ಮೇಲೆ ಈ ದುರ್ಘಟನೆ ನಡೆದಿದೆ.

ಬಾಲಕಿ ಆನಮ್ ಮೃತದೇಹ ಪತ್ತೆಯಾಗಿದ್ದು, ದಸ್ತಗೀರ್ ಗೌಂಡಿ ಶವಕ್ಕಾಗಿ ಹುಡುಕಾಟ ನಡೆದಿದೆ. ಮಗಳನ್ನು ರಕ್ಷಿಸಲು ನದಿಗೆ ಹಾರಿದ ತಂದೆಯೂ ಪ್ರಾಣ ಬಿಟ್ಟಿದ್ದಾನೆ. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಗಿಲು ಮುಟ್ಟಿದೆ. ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾ ಹಣ ಬಿಡುಗಡೆಗೆ ಸಂಸದರ ನೇತೃತ್ವದಲ್ಲಿ ಪ್ರತಿಭಟನೆ