Webdunia - Bharat's app for daily news and videos

Install App

ಪ್ರೀತಿ ನಿರಾಕರಿಸಿ ಬ್ರೇಕ್ ಅಪ್ ಎಂದಿದ್ದ ಪ್ರೇಯಸಿ ಕೊಲ್ಲಲು ಬಂದ ಪಾಗಲ್ ಪ್ರೇಮಿ!

Webdunia
ಗುರುವಾರ, 6 ಜುಲೈ 2023 (07:33 IST)
ಬೆಂಗಳೂರು : ಈ ಹಿಂದೆ ಒಂದೇ ಕಂಪೆನಿಯಲ್ಲಿ ಸಹದ್ಯೋಗಿಯಾಗಿದ್ದ ಅಕಾಂಕ್ಷ ಮತ್ತು ಅರ್ಪಿತ್ ನಡುವೆ ಸ್ನೇಹ ಬೆಳೆದಿತ್ತು. ಆ ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಒಂದೇ ಪ್ಲಾಟ್ನಲ್ಲಿ ಲಿವಿಂಗ್ ಟೂಗೆದರ್ ರಿಲೇಶನ್ನಲ್ಲಿದ್ದರು.
 
ಈ ವೇಳೆ ಪ್ರೇಯಸಿ ಅಕಾಂಕ್ಷ ಅರ್ಪಿತ್ಗೆ ಮದುವೆಯಾಗುವುದಾಗಿ ಹೇಳಿದ್ದಳಂತೆ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಪಿತ್ ಅಕಾಂಕ್ಷ ಬ್ರೇಕ್ ಅಪ್ ಅಂದಿದ್ದಕ್ಕೆ ಹೌಹಾರಿದ್ದ. ದೆಹಲಿಯಲ್ಲಿದ್ದಾಗಲೇ ತನಗೆ ಸಿಗದ ಪ್ರೇಯಸಿ ಅಕಾಂಕ್ಷ ಮತ್ಯಾರಿಗೂ ಸಿಗಬಾರದೆಂದು, ಆಕೆಯನ್ನು ಕೊಲೆ ಮಾಡಲೇಬೇಕು ನಿರ್ಧರಿಸಿ ಬೆಂಗಳೂರಿಗೆ ಬಂದಿದ್ದ.

ಅಕಾಂಕ್ಷಳನ್ನ ಕೊನೆಯದಾಗಿ ಭೇಟಿ ಮಾಡಿ ಮಾತನಾಡುವ ನೆಪ ಮಾಡಿಕೊಂಡು ಜೆಬಿ ನಗರದಲ್ಲಿ ಅಕಾಂಕ್ಷಳ ಫ್ಲಾಟ್ಗೆ ಬಂದವನು ಜೂನ್ 6 ರಂದು ಫ್ಲಾಟ್ನ ಕೋಣೆಯಲ್ಲಿ ಅಕಾಂಕ್ಷಳನ್ನ ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಎಸ್ಕೇಪ್ ಆಗಿದ್ದ.
ಜೂನ್ 6 ರಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಅರ್ಪಿತ್ ಜೆಬಿನಗರ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದಿದ್ದು ಬರೋಬ್ಬರಿ 27 ದಿನಗಳು. ಮೊಬೈಲ್ ಬಳಸಿದರೆ ಪೊಲೀಸರಿಗೆ ಸಿಕ್ಕಿಬೀಳುವ ಬಗ್ಗೆ ಅರಿತಿದ್ದ ಆರೋಪಿ ಅರ್ಪಿತ್ ಮೊಬೈಲ್ ಅನ್ನು ಬೆಂಗಳೂರಿಗೆ ಬರುವಾಗ ತಂದಿರಲಿಲ್ಲ.
ದೆಹಲಿಯಿಂದ ಬೆಂಗಳೂರಿಗೆ ಹೊರಡುವ ಮುನ್ನ ತನ್ನಿಬ್ಬರು ಸ್ನೇಹಿತರ ಬೆಂಗಳೂರಿಗೆ ಅಕಾಂಕ್ಷಳನ್ನ ಮೀಟ್ ಮಾಡುವುದಾಗಿ ಇನ್ಸ್ ಟಾಗ್ರಾಮ್ ಹೇಳಿದ್ದನ್ನು ಡಿಲೀಟ್ ಮಾಡಿದ್ದ. ಆ ಬಳಿಕ ಪಕ್ಕಾ ಪ್ರೀಪ್ಲಾನ್ ಮಾಡಿಕೊಂಡೆ, ಕೊಲೆ ಬಳಿಕ ಎಸ್ಕೇಪ್ ಆಗಲು ಕೇವಲ 5 ಸಾವಿರ ಹಣ ಮತ್ತು 7-8 ಜೊತೆ ಬಟ್ಟೆಗಳನ್ನ ಪ್ಯಾಕ್ ಮಾಡಿ ವಿಜಯವಾಡದಲ್ಲಿ ಇರಿಸಿ ಬಂದಿದ್ದ.
ಬೆಂಗಳೂರಿನ ಜೆಬಿ ನಗರದ ಅಕಾಂಕ್ಷ ಪ್ಲಾಟ್ ತೆರಳುವ ಮಾರ್ಗದಲ್ಲಿ ಇದ್ದ ರಸ್ತೆ ಬದಿ ಹಾಗೂ ಏರಿಯಾದ ಮನೆಗಳ ಸಿಸಿ ಕ್ಯಾಮಾರ ಗಮನಿಸಿ, ವೆಹಿಕಲ್ ಗಳಲ್ಲಿ ಓಡಾಡಿದ್ರೆ ಪೊಲೀಸರಿಗೆ ಸುಳಿವು ಸಿಕ್ಕಿ ಆ ಬಳಿಕ ಸಿಕ್ಕಿಬೀಳಬಹುದೆಂದು ನಡೆದುಕೊಂಡೆ ಪ್ಲಾಟ್ ಗೆ ಬಂದಿದ್ದ, ನಂತರ ಅಕಾಂಕ್ಷಳನ್ನ ಕೊಲೆ ಮಾಡಿ, ಫ್ಲಾಟ್ ನಿಂದ ಹೊರಬಂದವ ಅಕಾಂಕ್ಷಳ ಫ್ಲಾಟ್ ಗೆ ಆಕೆ ಸ್ನೇಹಿತೆ ಬಂದು ಹತ್ಯೆ ವಿಚಾರ ಆಕೆಗೆ ತಿಳಿಯುವ ವರೆಗೂ ಪ್ಲಾಟ್ ಬಳಿಯೇ ಮರೆಯಲ್ಲಿ ನಿಂತು ನೋಡಿ, ಆ ಬಳಿಕ ಬರೋಬ್ಬರಿ 8 ಕಿ.ಮೀ ನಡೆದು ಬಂದು ಬೆಂಗಳೂರಿನಿಂದ ಟ್ರೈನ್ ಮೂಲಕ ಆರೋಪಿ ಅರ್ಪಿತ್ ಹೈದರಾಬಾದ್ ಗೆ ತೆರಳಿದ್ದ.

ತಾನು ಕೆಲಸ ಮಾಡುವ ದೆಹಲಿಗೆ ತೆರಳಿದ್ರೆ ಪೊಲೀಸರು ಮೊದಲು ದೆಹಲಿಗೆ ಹುಡುಕಿ ಬರುವ ಸಾಧ್ಯತೆಗಳನ್ನ ಅಂದಾಜಿಸಿ ಸಿಕ್ಕಿ ಬೀಳುವ ಆತಂಕದಿಂದ, ಹೈದರಾಬಾದ್ ಗೆ ಹೋಗಿದ್ದ. ಆ ಬಳಿಕ ಹೈದರಾಬಾದ್ ನಿಂದ ಪ್ಯಾಕ್ ಮಾಡಿ ರೆಡಿ ಇಟ್ಟಿದ್ದ ಬಟ್ಟೆಗಳ ಬ್ಯಾಗ್ ಮತ್ತು ಖರ್ಚಿಗೆ 5 ಸಾವಿರ ಹಣ ತೆಗೆದುಕೊಂಡು ದೆಹಲಿಗೆ ಹೊರಡುವ ಟ್ರೈನ್ ಏರಿದ್ದಾನೆ.

ಈ ನಡುವೆ ಮೊಬೈಲ್ ಇಲ್ಲದ ಕಾರಣ ಇಂಟರ್ ನೆಟ್ ಮೂಲಕ ತನ್ನ ಸ್ನೇಹಿತರನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಅವ್ರ ಸಹಾಯ ಪಡೆಯಲು ಅರ್ಪಿತ್ ನಡೆಸಿದ್ದ ಯತ್ನ ಕೈಗೂಡದೆ ಸ್ನೇಹಿತರಿಂದ ಯಾವುದೇ ರೆಸ್ಪಾನ್ಸ್ ಬಾರದ ಹಿನ್ನಲೆ ತಲೆಮರೆಸಿಕೊಳ್ಳಲು ಯೂಟರ್ನ್ ಹೊಡೆದಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಅಬ್ಬಾ.. ಚಿನ್ನದ ದರ ಇಷ್ಟೊಂದಾ ಎನ್ನುವಷ್ಟಾಗಿದೆ ನೋಡಿ

Air India Plane crash: ವಿಮಾನ ದುರಂತ ವೀಕ್ಷಿಸಿ ರೀಲ್ಸ್ ಮಾಡ್ತೀರಾ, ಸಚಿವ ರಾಮಮೋಹನ್ ನಾಯ್ಡುಗೆ ತರಾಟೆ

Air India plane crash: ವಿಮಾನ ಪತನಕ್ಕೆ ಇದೇ ಕಾರಣನಾ

Rahul Gandhi: ಅಪಘಾತವಾದ ವಿಮಾನದಲ್ಲಿ ನೀವಿರಬೇಕಿತ್ತು, ರಾಹುಲ್ ಗಾಂಧಿಗೆ ಹೇಳಿದ ಎಕ್ಸ್ ಬಳಕೆದಾರ

Air India Plane crash: ಬೆಳ್ಳಂ ಬೆಳಿಗ್ಗೆಯೇ ಅಹಮ್ಮದಾಬಾದ್ ಗೆ ಓಡೋಡಿ ಬಂದ ಮೋದಿ video

ಮುಂದಿನ ಸುದ್ದಿ
Show comments