Select Your Language

Notifications

webdunia
webdunia
webdunia
webdunia

ದೇಶದ್ಯಾಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ; ನೆರವಿಗೆ ಮುಂದಾದ ಇನ್ಫೋಸಿಸ್ ಫೌಂಡೇಷನ್

ದೇಶದ್ಯಾಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ; ನೆರವಿಗೆ ಮುಂದಾದ  ಇನ್ಫೋಸಿಸ್ ಫೌಂಡೇಷನ್
ಬೆಂಗಳೂರು , ಶುಕ್ರವಾರ, 13 ಮಾರ್ಚ್ 2020 (10:43 IST)
ಬೆಂಗಳೂರು : ದೇಶದ್ಯಾಂತ ಕೊರೊನಾ ಸೋಂಕು ಹರಡುವ ಭೀತಿ ಹಿನ್ನಲೆ ನೆರವು ನೀಡಲು ಇನ್ಫೋಸಿಸ್ ಫೌಂಡೇಷನ್  ಮುಂದಾಗಿದೆ ಎಂಬುದಾಗಿ ತಿಳಿದುಬಂದಿದೆ.

ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೇಸ್ ಬುಕ್ ಪೋಸ್ಟ್ ಮಾಡಿದ್ದು , ಕೊರೊನಾ ಸೋಂಕು ಸಂಬಂಧ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ನಿನ್ನೆ ಕರೆ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

 

ಅಲ್ಲದೇ ಒಂದು ಆಸ್ಪತ್ರೆಯನ್ನು ನಿರ್ವಹಣೆ ಮಾಡುವುದಾಗಿ ತಿಳಿಸಿದ್ದಾರೆ. ಸುಧಾಮೂರ್ತಿ ಅವರದ್ದು ನಿಜವಾದ ಮಾತೃಕಾಳಜಿ. ಈ ಹೃದಯವಂತಿಕೆಗೆ ನನ್ನ ಹೃದಯ ತುಂಬಿತು ಎಂದು  ಸಚಿವ ಸುರೇಶ್ ಕುಮಾರ್ ಅವರು ಪೋಸ್ಟ್ ಮಾಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ಥಿರತೆ