Webdunia - Bharat's app for daily news and videos

Install App

ಮೋಡಿಗೆ ಬಿದ್ದ 15ರ ಬಾಲೆ! ಮುಂದೇನಾಯ್ತು?

Webdunia
ಸೋಮವಾರ, 10 ಜನವರಿ 2022 (14:14 IST)
ಬೆಂಗಳೂರು : ಸ್ವಾಮೀಜಿಯ ಮೋಡಿಗೆ ಮರುಳಾದ 15 ವರ್ಷದ ಬಾಲಕಿ ಮನೆಯವರನ್ನು ನಿರಾಕರಿಸಿ ಸ್ವಾಮೀಜಿ ಬಳಿ ಹೋಗಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಪೋಷಕರು ದೂರು ನೀಡಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ. 

ಜನವರಿ 1ರಂದು ಬಾಲಕಿ ಬೆಳಗ್ಗೆ 5:30ರ ಸುಮಾರಿಗೆ ತನ್ನ ತಾಯಿಯೊಂದಿಗೆ ಜಗಳ ಮಾಡಿದ್ದಾಳೆ. ತನ್ನ ತಾಯಿ ಹಾಗೂ ಮಾವ ಅವರನ್ನು ಕೂಡಿ ಹಾಕಿದ ಆಕೆ ಮನೆಯ ಚೀಲಕವನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಟಿವಿಎಸ್ ಸ್ಕೂಟರ್ ತೆಗೆದುಕೊಂಡು ಎಲ್ಲೋ ಹೋಗಿದ್ದಳು.

ಮಗಳು ಓದುತ್ತಿದ್ದ ಶಾಲೆ ಹಾಗೂ ತಿಳಿದಿರುವ ಕಡೆಯೆಲ್ಲಾ ಹುಡುಕಾಡಿ ನೋಡಿದಾಗ ಉತ್ತರಹಳ್ಳಿಯ ಸ್ವಾಮೀಜಿ ಮನೆಯ ಎದುರು ದ್ವಿಚಕ್ರವಾಹನ ನಿಂತಿತ್ತು.

ಈ ಹಿಂದೆ ನನ್ನ ಮಗಳಿಗೆ ದೀಕ್ಷೆ ಕೊಡುವುದಾಗಿ ಹೇಳುತ್ತಿದ್ದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಮೇಲೆ ಅನುಮಾನವಿದ್ದು, ಕಾಣೆಯಾಗಿರುವ ನಮ್ಮ ಮಗಳನ್ನು ಹುಡುಕಿಕೊಡುವಂತೆ ದೂರಿನಲ್ಲಿ ತಿಳಿಸಿದ್ದಾರೆ. 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments