Webdunia - Bharat's app for daily news and videos

Install App

ಸೆಪ್ಟೆಂಬರ್ 9 ರಂದು 9 ನೇ ಬಸವ ಪಂಚಮಿ ಸಂಭ್ರಮ

Webdunia
ಗುರುವಾರ, 6 ಸೆಪ್ಟಂಬರ್ 2018 (15:45 IST)
ಕೂಡಲಸಂಗಮದಲ್ಲಿ ಸೆಪ್ಟೆಂಬರ್ 9 ರಂದು 9 ನೇ ಬಸವ ಪಂಚಮಿ ಕಾರ್ಯಕ್ರಮ ಅದ್ಧೂರಿಯಿಂದ ನಡೆಯಲಿದೆ.

ವಿಜಯಪುರದಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ್ದಾರೆ. ಅಂದು ಸಾಮೂಹಿಕ ಇಷ್ಟಲಿಂಗ ಮಾಹಾಪೂಜೆ ಹಾಗೂ ದೀಕ್ಷಾ ಅಭಿಯಾನ ನಡೆಸಲಾಗುವುದು. ಸಾವಿರಾರು ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಗುವುದು. ಇದೇ ವೇಳೆ ಸಮಾಜದ ನೂತನ ಶಾಸಕರುಗಳಿಗೆ ಅಭಿನಂದನೆ ಸಲ್ಲಿಸಲಾಗುವುದು. ಸರ್ ಸಿದ್ದಪ್ಪ ಕಂಬಳಿ ರಾಜ್ಯ ಮಟ್ಟದ ಪಂಚಮಸಾಲಿ ವಿದ್ಯಾರ್ಥಿ ಪುರಸ್ಕಾರ ಮಾಡಲಾಗುವುದು ಎಂದರು.


ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿರಂತರವಾಗಿದೆ. ಈಗಾಗಲೇ ಲಿಂಗಾಯತ ಹೋರಾಟ ಒಂದು ಹಂತ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣನವರ ಮೇಲೆ ಅಭಿಮಾನ ಹೊಂದಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕಳುಹಿಸಿದ ಮನವಿಯನ್ನು ಪುರಸ್ಕಾರ ಮಾಡುತ್ತಾರೆ ಎಂಬ ನಂಬಿಕೆ ಇದೆ.

ಒಂದು ವೇಳೆ ಮಾಡದಿದ್ರೆ ಲೋಕಸಭೆ ಚುನಾವಣೆಗೂ ಮುನ್ನ ನಾವೇ ಕೇಂದ್ರಕ್ಕೆ ಹೋಗಲಿದ್ದೇವೆ. ಪ್ರಧಾನಿ ಅವರಿಂದ ಒಂದು ದಿನಾಂಕ ಪಡೆದು ಅವರನ್ನು ಭೇಟಿಯಾಗಿ ಲಿಂಗಾಯತ ಧರ್ಮದ ಬಗ್ಗೆ ಮತ್ತಷ್ಟು ಮನವರಿಕೆ ಮಾಡಲಿದ್ದೇವೆ ಎಂದರು.

ಲಿಂಗಾಯತ ಹೋರಾಟದಲ್ಲಿ ಭಾಗವಹಿಸಿದವರು ಎಂ ಎಲ್ ಎ ಚುನಾವಣೆಯಲ್ಲಿ ಸೋತ ವಿಚಾರಕ್ಕೆ ಮಾತನಾಡಿದ ಅವರು, ಲಿಂಗಾಯತ ಹೋರಾಟಕ್ಕೂ ರಾಜಕೀಯಕ್ಕೂ ಸಂಭಂದವಿಲ್ಲ. ನಮಗೆ ಯಾವುದೇ ಪಕ್ಷಭೇದವಿಲ್ಲ, ಲಿಂಗಾಯತ ಧರ್ಮಕ್ಕೆ ಎಲ್ಲರೂ ಬೆಂಬಲವಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬರಗಾಲವಿರುವುದರಿಂದ ಸಿಎಂ ಅವರು ಇಲ್ಲಿಗೆ ಬಂದು ಭೇಟಿ ಮಾಡಬೇಕಿದೆ. ಕುಮಾರಸ್ವಾಮಿ ಅವರು ಇಲ್ಲಿನ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಹಲಸಿನ ಹಣ್ಣು ತಿಂದು ವಾಹನ ಚಲಾಯಿಸುವಾಗ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ರೆ ಕತೆ ಫಿನಿಶ್

ವಿಧಾನಸಭೆ ಗೆಲ್ಲಲು ನೀವೆಷ್ಟು ಅಕ್ರಮ ಮಾಡಿದ್ದೀರಿ: ರಾಹುಲ್ ಗಾಂಧಿಗೆ ಸಿಟಿ ರವಿ ತಿರುಗೇಟು

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಆರ್ ಎಸ್ಎಸ್ ವಿಷವಿದ್ದಂತೆ ಎಂದ ಮಲ್ಲಿಕಾರ್ಜುನ ಖರ್ಗೆ: ವಿಷ ಹಾಕಿದವರು ನೀವು ಎಂದ ವಿಜಯೇಂದ್ರ

ಮುಂದಿನ ಸುದ್ದಿ
Show comments