Webdunia - Bharat's app for daily news and videos

Install App

ಕಳಪೆ ಗುಣಮಟ್ಟದ 9 ಇಂಜೆಕ್ಷನ್ ಗಳು ಬ್ಯಾನ್: ಯಾವೆಲ್ಲಾ ಇಂಜೆಕ್ಷನ್ ಇಲ್ಲಿದೆ ವಿವರ

Krishnaveni K
ಶನಿವಾರ, 22 ಫೆಬ್ರವರಿ 2025 (10:34 IST)
Photo Credit: X
ಬೆಂಗಳೂರು: ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 9 ಇಂಜೆಕ್ಷನ್ ಗಳನ್ನು ರಾಜ್ಯ ಆರೋಗ್ಯ ಇಲಾಖೆ ನಿಷೇಧಿತ ಪಟ್ಟಿಗೆ ಸೇರಿಸಿದೆ. ಆ ಇಂಜೆಕ್ಷನ್ ಗಳು ಯಾವುವು ಇಲ್ಲಿದೆ ಪಟ್ಟಿ.

ಅಸುರಕ್ಷಿತ ಮತ್ತು ಗುಣಮಟ್ಟ ಪರಿಶೀಲಿಸಲು ಈ ಇಂಜೆಕ್ಷನ್ ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ನಿರೀಕ್ಷಿತ ಗುಣಮಟ್ಟ ಹೊಂದಿಲ್ಲ ಎಂಬ ಕಾರಣಕ್ಕೆ ಈ ಇಂಜೆಕ್ಷನ್ ಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ಸಾಮಾನ್ಯ ಜ್ವರಕ್ಕೆ ನೀಡಲಾಗುವ ಇಂಜೆಕ್ಷನ್ ಕೂಡಾ ಸೇರಿದೆ.

ಈ ಔಷಧಿಗಳನ್ನು ಉತ್ಪಾದಿಸುವ ಕಂಪನಿಗಳಲ್ಲಿ ಔಷಧಿ ಉತ್ಪಾದನಾ ಪದ್ಧತಿಯ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸಬೇಕು ಮತ್ತು ಅಲ್ಲಿಯವರೆಗೆ ಈ ಕಂಪನಿಗಳ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ ನೀಡಿದ್ದಾರೆ.

ನಿಷೇಧಿತ 9 ಇಂಜೆಕ್ಷನ್ ಗಳು ಮತ್ತು ಅವುಗಳ ಉಪಯೋಗ

  1. ಮೆಟ್ರೋನಿಡಜೋಲ್: ಬ್ಯಾಕ್ಟೀರಿಯಾ ಸೋಂಕಿಗೆ
  2. ಮೆಟ್ರೊನಿಡಜೋಲ್ (ಐಎಚ್ಎಲ್ ಲೈಫ್ ಸೈನ್ಸಸ್): ಬ್ಯಾಕ್ಟೀರಿಯಾ ಸೋಂಕು ತಡೆ
  3. ಡಿಕ್ಲೊಫೆನಕ್ ಸೋಡಿಯಂ: ನೋವು ನಿವಾರಕ ಇಂಜೆಕ್ಷನ್
  4. ಡೆಕ್ರೋಟ್ರೋಸ್ ಇಂಜೆಕ್ಷನ್: ರಕ್ತದಲ್ಲಿ ಸಕ್ಕರೆ ಮತ್ತು ಸೋಡಿಯಂ ಅಂಶ ಕಡಿಮೆ ಮಾಡಲು
  5.   ಫ್ರುಸ್ ಮೈಡ್ ಇಂಜೆಕ್ಷನ್: ಆರಲ್ ಔಷಧಿ ತೆಗೆದುಕೊಳ್ಳಲು ಸಾಧ್ಯವಾಗದವರಿಗೆ
  6. ಪಿಪರೆಸಿಲಿಯನ್ ಆಂಡ್ ತಜೊಬೆಕ್ಚಂ: ನಿಮೋನಿಯಾ, ಚರ್ಮ ಮತ್ತು ಸ್ತ್ರೀರೋಗ
  7. ಕ್ಯಾಲ್ಶಿಯಂ ಗ್ಲೊಕೊನ್ಕೆಟ್:  ಕ್ಯಾಲ್ಶಿಯಂ ಪ್ರಮಾಣ ಹೆಚ್ಚಿಸಲು
  8. ಒಂಡಾನ್ಸರ್ಟನ್ ಕ್ಯಾನ್ಸರ್: ಔಷಧಿಯಿಂದ ವಾಕರಿಕೆ ಆಗುತ್ತಿದ್ದರೆ
  9. ಅಟ್ರೋಪ್ಚೆನ್ ಸಲ್ಫೇಟ್: ವಿಷ ಉಪಶಮನಕ್ಕೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಲೆಯಾದ ಸುಹಾಸ್‌ ಶೆಟ್ಟಿ ಮೇಲೆ ಐದು ಕೇಸ್‌ಗಳಿವೆ: ಹೀಗಾಗಿ ಅವರ ಮನೆಗೆ ಭೇಟಿ ನೀಡಿಲ್ಲ ಎಂದ ಪರಮೇಶ್ವರ್‌

ಪಾಕ್‌ಗೆ ಭಾರತ ಮತ್ತೊಂದು ಜಲಾಘಾತ: ಸಿಂಧೂ ನದಿ ಆಯ್ತು, ಈಗ ಮತ್ತೆರಡು ಅಣೆಕಟ್ಟುಗಳ ನೀರಿಗೂ ಕತ್ತರಿ

ದೇಶದ ಏಕತೆಗಾಗಿ ಮೋದಿ ತೆಗೆದುಕೊಳ್ಳುವ ಕ್ರಮಕ್ಕೆ ಕಾಂಗ್ರೆಸ್‌ ಬೆಂಬಲ: ಎಐಸಿಸಿ ಅಧ್ಯಕ್ಷ ಖರ್ಗೆ

ಗಡಿಯಲ್ಲಿ ಹೆಚ್ಚಿದ ಯುದ್ಧಭೀತಿ: ಪ್ರಧಾನಿ ಮೋದಿಯನ್ನು ತುರ್ತಾಗಿ ಭೇಟಿಯಾದ ವಾಯುಸೇನೆ ಮುಖ್ಯಸ್ಥ ಎ.ಪಿ. ಸಿಂಗ್

ಸುಹಾಸ್ ಶೆಟ್ಟಿ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸ್ಕೆಚ್‌: ನಾಳೆಯೇ ಡೇಟ್‌ ಫಿಕ್ಸ್‌ ಎಂದು ಪೋಸ್ಟ್‌

ಮುಂದಿನ ಸುದ್ದಿ
Show comments