Webdunia - Bharat's app for daily news and videos

Install App

ಟ್ರಾಫಿಕ್ ಫೈನ್ ಪಾವತಿಸಲು 50% ಆಫರ್

Webdunia
ಶುಕ್ರವಾರ, 3 ಫೆಬ್ರವರಿ 2023 (18:29 IST)
50% ಡಿಸ್ಕೌಂಟ್.ಈ ಬೋರ್ಡನ್ನ ದೊಡ್ಡ ದೊಡ್ಡ ಮಾಲ್‌ಗಳು.ಬಟ್ಟೆ ಅಂಗಡಿಗಳಲ್ಲಿ ಮಾತ್ರ ನೋಡಿರ್ತೀರಾ.ಆದ್ರೆ ಸರ್ಕಾರದ‌ ಮಟ್ಟದಲ್ಲೂ 50% ಡಿಸ್ಕೌಂಟ್ ಸಿಗ್ತಿದೆ ಅಂದ್ರೆ ನೀವು ನಂಬ್ತೀರಾ.ಖಂಡಿತಾ ನಂಬಲೇ ಬೇಕು.ಇದೇ 50% ಆಫರ್ ಲಾಭ ಪಡೆಯಲು ಜನ ಮುಗಿಬಿದ್ದಿದ್ರು.ಬೆಂಗಳೂರು ವಾಹನ ಸವಾರರಿಗೆ ಅದ್ರಲ್ಲೂ ಟ್ರಾಫಿಕ್ ನಿಯಮ ಉಲ್ಲಂಘಿಸಿದವ್ರಿಗೆ ಕರ್ನಾಟಕ ಸರ್ಕಾರ ಬಂಪರ್ ಆಫರ್ ನೀಡಿದೆ.ಇರುವ ಟ್ರಾಫಿಕ್ ದಂಡದ ಮೊತ್ತದಲ್ಲಿ ಶೇ.50 ರಷ್ಟು ಪಾವತಿಸಲು ಅನುಮತಿಯನ್ನು ನೀಡಿದೆ.ಇದರ ಪ್ರಯೋಜನವನ್ನು ಬೆಂಗಳೂರೊಗರು ಸರಿಯಾದ ರೀತಿಯಲ್ಲೆ ಪಡೆದುಕೊಳ್ತಿದ್ದಾರೆ.ಹೌದು ಸಾರಿಗೆ ಇಲಾಖೆ ಮತ್ತು ಹೈಕೋರ್ಟ್ ಲೀಗಲ್ ಸರ್ವಿಸಸ್ ಅಥಾರಿಟಿ 50 % ರಿಯಾಯಿತಿಯಲ್ಲಿ ದಂಡ ಕಟ್ಟಲು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು‌.ಈ ಮನವಿಗೆ ಸಮ್ಮತಿಸಿದ ಸರ್ಕಾರ‌ ಡಿಸ್ಕೌಂಟ್ ನೀಡಿ ನೋಟಿಫಿಕೇಶನ್ ಹೊರಡಿಸಿದೆ.ಸದ್ಯ ಒಂದು ಸಾವಿರ ಕೋಟಿಗೂ ಅಧಿಕ ದಂಡದ ಮೊತ್ತ ಬಾಕಿ ಇದ್ದು ಜನರು ಇದರ ಸದುಪಯೋಗ ಪಡೆಸಿಕೊಳ್ಳಬಹುದು.ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡಬೇಕೆಂದರೆ ಫೆಬ್ರವರಿ 11 ರೊಳಗೆ ಮಾತ್ರ ಪಾವತಿಸಬೇಕು‌ ನಂತರ ಯಾವುದೇ ರಿಯಾಯಿತಿ ಇರೋದಿಲ್ಲ.

 ಕರ್ನಾಟಕ ಒನ್ ವೆಬ್ ಸೈಟ್ ಮೂಲಕ ವಿವರ ಪಡೆದು ದಂಡ ಪಾವತಿಸಬಹುದು.ಜೆತೆಗೆ ಪೇಟಿಎಂ ಮೂಲಕ ಉಲ್ಲಂಘನೆ ವಿವರ ಪಡೆದು ದಂಡ ಪಾವತಿಗೆ ಅವಕಾಶ ನೋಡಲಾಗಿದೆ.ಅಲ್ಲದೇ ಹತ್ತಿರದ ಸಂಚಾರ ಪೊಲೀಸ್ ಠಾಣೆಯಲ್ಲಿ ವಾಹನ ಸಂಖ್ಯೆ ನೀಡಿ ದಂಡ ಕಟ್ಟುವ ಮೂಲಕ‌ ರಶೀದಿ ಪಡೆದುಕೊಳ್ಳಬಹುದು.ಅಲ್ಲದೇ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣೆ ಕೇಂದ್ರದ ಮೊದಲ ಮಹಡಿಯಲ್ಲಿ ದಂಡ ಕಟ್ಟಲು ಅನುಮತಿ ನೀಡಲಾಗಿದೆ.

ಇನ್ನೂ ಜನ ಕೂಡ ತಮ್ಮ ದಂಡ ಕಡಿಮೆ ಮೊತ್ತದಲ್ಲಿ ಕಟ್ಟಿ ಕ್ಲಿಯರ್ ಮಾಡಿಕೊಳ್ಳೋಣ ಅಂತಾ ದಂಡ ಪಾವತಿಗೆ ಮುಂದಾಗಿದ್ದಾರೆ.ಆಫರ್ ಕೊಟ್ಟ ಮೊದಲ ದಿನದಲ್ಲಿಯೇ ಕೋಟಿ ಕೊಟಿ ಮೊತ್ತದ ಹಣ ಹರಿದುಬಂದಿದೆ.ಸಿಟಿಮಂದಿ ಪೊಲೀಸರೆಂದರೆ ತಲೆ ಮರೆಸಿಕೊಂಡು ಹೋಗ್ತಿದ್ರು.ದಂಡ ಕಟ್ಟಿ ಅಂದ್ರೆ ತಲೆ ಕೆರೆದುಕೊಂಡು ನಿಂತಿರ್ತಿದ್ರು ಆದ್ರೆ ಇವತ್ತು ಜನರೇ ಪೊಲೀಸರನ್ನ ಹುಡುಕಿಕೊಂಡು ಬಂದು ಉತ್ಸುಕತೆಯಿಂದಲೇ ದಂಡ ಪಾವತಿ ಮಾಡುತ್ತಿದ್ದಾರೆ.ಸದ್ಯ 2 ಕೋಟಿ 35 ಲಕ್ಷದ 69 ಸಾವಿರದ 063 ಕೇಸ್ ಗಳು ಬಾಕಿ ಇದ್ರೆ.1144 ಕೋಟಿ,46 ಲಕ್ಷ,44 ಸಾವಿರದ 500 ರೂಪಾಯಿ ಮೊತ್ತದ ದಂಡ ಕಲೆಕ್ಟ್ ಆಗಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

1.3 ಮಿಲಿಯನ್‌ ಅನುಯಾಯಿಗಳನ್ನು ಹೊಂದಿದ್ದ ಪಾಕ್‌ ಟಿಕ್‌ಟಾಕ್‌ ಸ್ಟಾರ್‌ ಗುಂಡೇಟಿಗೆ ಬಲಿ, CCTV Video

ಪಡುಬಿದ್ರಿ ಡೇವಿಡ್ ಹತ್ಯೆ ಪ್ರಕರಣ, ಮಹತ್ವದ ಬೆಳವಣಿಗೆ

ಉಡುಪಿ, ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ರಾಸಾಯನಿಕ ಬಳಕೆ ಪತ್ತೆ

ಪ್ರೀತಿಸಿ ಮದುವೆಯಾಗಿದ್ದಕ್ಕೆ ಗಂಡನ ಮನೆಯಿಂದ ಕಿರುಕುಳ, ಮಗುವನ್ನು ಉಸಿರುಗಟ್ಟಿಸಿ ಕೊಂದು ಸಾವಿಗೆ ಶರಣಾದ ಮಹಿಳೆ

ಕ್ಲಾಸ್‌ವರ್ಕ್ ಮಾಡದಕ್ಕೆ ಕೆನ್ನೆಗೆ ಬಾರಿಸಿದ ಶಿಕ್ಷಕಿ, ಆಘಾತಗೊಂಡ ತರಗತಿಯಲ್ಲೇ ಉಸಿರು ಚೆಲ್ಲಿದ ಎಲ್‌ಕೆಜಿ ಬಾಲಕ, CCTV Video

ಮುಂದಿನ ಸುದ್ದಿ
Show comments