Publish Date: Wed, 04 May 2022 (17:46 IST)
Updated Date: Wed, 04 May 2022 (17:54 IST)
ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ. ಪ್ರತಿಯೊಂದು ಯೋಜನೆಯಲ್ಲಿ ಕಮಿಷನ್ ಹೊಗ್ತಾ ಇದೆ. ಇದಕ್ಕೆ RSS ಕುಮ್ಮಕ್ಕು ಇದೆ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಶ್ರೀಮಂತ NGO ಆಗಿ ಆರ್ಎಸ್ಎಸ್ ಇದೆ. ಅಷ್ಟೊಂದು ಹಣ RSSಗೆ ಹೇಗೆ ಬಂತು. ಪ್ರತಿಯೊಬ್ಬ ಸಚಿವರ ಬಳಿ RSS, OSD ಇದ್ದಾರೆ. ಇವರ ಮೂಲಕ ಹಣ ಕಲೆಕ್ಷನ್ ಮಾಡ್ತಾರೆ. ಹವಿನಪುರದಲ್ಲಿ ಕುಳಿತು ಹಣ ಕಲೆಕ್ಷನ್ ಮಾಡ್ತಾರೆ. ನಿನ್ನೆ ಅಮಿತ್ ಶಾ ಬಂದಿದ್ರು, ಯಾವುದೇ ಕ್ರಮ ಕೈಗೊಂಡಿಲ್ಲ. ಅಶ್ವಥ್ ನಾರಾಯಣ ಮಲ್ಲೇಶ್ವರದಲ್ಲಿ ಗುಳಂ ನಾರಾಯಣ ಆಗಿದ್ದಾರೆ. ಅವರ ಸಹೋದರ ಹಣ ಪಡೆದಿದ್ದು ನೇರವಾಗಿ ಸಾಬೀತಾಗಿದೆ. ಹಾಗಾಗಿ ಕೂಡಲೇ ಅಶ್ವಥ್ ನಾರಾಯಣ್ ಹಾಗು ಗೃಹ ಸಚಿವ ಆರಗ ಜ್ಞಾನೆಂದ್ರ ಕೂಡ ರಾಜೀನಾಮೆ ನೀಡಬೇಕು. ಸಂಪೂರ್ಣವಾಗಿ ತನಿಖೆಯಾಗಬೇಕು ಬಿ ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.