Select Your Language

Notifications

webdunia
webdunia
webdunia
webdunia

370 ರದ್ದು: ಕಾಂಗ್ರೆಸ್ ಕಳಂಕ ಹೊರಟೋಯ್ತು ಎಂದ ಮುತಾಲಿಕ್

370 ರದ್ದು: ಕಾಂಗ್ರೆಸ್ ಕಳಂಕ ಹೊರಟೋಯ್ತು ಎಂದ ಮುತಾಲಿಕ್
ಧಾರವಾಡ , ಸೋಮವಾರ, 5 ಆಗಸ್ಟ್ 2019 (17:51 IST)
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 370 ಅನುಚ್ಛೇದ ಕ್ಯಾನ್ಸಲ್ ಮಾಡಿರೋದ್ರಿಂದ ಕಾಂಗ್ರೆಸ್ ಮಾಡಿಟ್ಟಿದ್ದ ಕಳಂಕ ದೂರಾಗಿದೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಹೇಳಿದ್ದಾರೆ.

ಕೈ ಪಾಳೆಯದ ವಿರುದ್ಧ ಹರಿಹಾಯ್ದ ಅವರು, ಏಳು ದಶಕಗಳಿಂದ ದೇಶಕ್ಕೆ ಕಳಂಕದ ರೀತಿಯಲ್ಲಿ ಕಾಂಗ್ರೆಸ್ ಬೆಳೆಸಿಕೊಂಡು ಬಂದಿತ್ತು.

ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರವರ ಕೆಲಸ ಸರಿ ಮಾಡೋಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಕೇಂದ್ರ ಸರಕಾರದ ನೂತನ ನಿರ್ಧಾರವನ್ನ ಸ್ವಾಗತ ಮಾಡೋದಾಗಿ ಪ್ರಮೋದ್ ಮುತಾಲಿಕ್ ಹೇಳಿದ್ರು.

ಸೈನಿಕರ ಮೇಲೆ ದಬ್ಬಾಳಿಕೆ, ಹಿಂದುಗಳ ಮೇಲೆ ಆಕ್ರಮಣ ಮಾಡ್ತಿದ್ದವರಿಗೆ ಖಡಕ್ ಉತ್ತರ ಕೊಡಲಾಗಿದೆ ಅಂತ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ನಿಲ್ದಾಣ ಪಕ್ಕದಲ್ಲೇ ನಡೆಯಿತು ಇಂಥ ಘಟನೆ