Publish Date: Sun, 20 Nov 2022 (20:12 IST)
Updated Date: Sun, 20 Nov 2022 (20:17 IST)
ನಮ್ಮ ಕ್ಷೇತ್ರದಲ್ಲೂ 22 ಸಾವಿರ ಮತಗಳು ಡಿಲೀಟ್ ಆಗಿವೆ. ಯಾಕೆ ಡಿಲೀಟ್ ಅಗಿವೆ ಎಂಬುದು ನಮಗೆ ತಿಳಿದಿಲ್ಲ. ನಾವು ಮಸೀದಿ, ಚರ್ಚ್, ಮನೆಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ..... ಬಳಿಕ ಪುಲಕೇಶಿ ನಗರಕ್ಕೆ ಪ್ರಸನ್ನ ಕುಮಾರ್ ಅರ್ಜಿ ಹಾಕಿರುವ ವಿಚಾರ ಕುರಿತು ಮಾತನಾಡಿ, ನಾನು ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ. ನಾನು ಹಾಲಿ ಶಾಸಕ ಕೂಡ. ಟಿಕೆಟ್ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸ್ವ ಪಕ್ಷದವರೇ ಸೋಲಿಸಲು ಪ್ಲಾನ್ ಮಾಡಿರುವ ವಿಚಾರ ಹೈಕಮಾಂಡ್ ಗೊತ್ತಿದೆ. ನಾನು ಕೂಡ ಸಭೆಯಲ್ಲಿ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ಕರೆದು ಮಾತಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.